Advertisement

ಛತ್ತೀಸ್‌ಗಢ : ಭದ್ರತಾ ಪಡೆಗಳ ಗುಂಡಿಗೆ ಓರ್ವ ನಕ್ಸಲ್‌ ಬಲಿ

12:40 PM Nov 02, 2018 | Team Udayavani |

ರಾಯಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿಂದು  ಶುಕ್ರವಾರ ಭದ್ರತಾ ಪಡೆಗಳು ನಡೆಸಿರುವ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್‌ ಹತನಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ನಕ್ಸಲರೊಂದಿಗಿನ ಗುಂಡಿನ ಕಾಳಗ ಈ ಹೊತ್ತಿನಲ್ಲೂ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಕ್ಸಲ್‌ ನಿಗ್ರಹ ಕಾರ್ಯಾಚರಣೆಗೆಂದು ಹೋಗಿದ್ದ ಜಿಲ್ಲಾ ಮೀಸಲು ಗಾರ್ಡ್‌ ಮತ್ತು ವಿಶೇಷ ಕಾರ್ಯ ಪಡೆ ಜಂಟಿ ತಂಡದವರು ಗಂಗಲೂರು ಪೊಲೀಸ್‌ ಠಾಣೆ ವ್ಯಾಪ್ತಿಯ ಕಾಮಕನಾರ್‌ ಗ್ರಾಮದಲ್ಲಿ ಅರಣ್ಯದ ಮೂಲಕ ಸಾಗುತ್ತಿದ್ದ ನಕ್ಸಲರು ಅವರ ಮೇಲೆ ಗುಂಡೆಸೆದರು. ಭದ್ರತಾ ಪಡೆಗಳು ಕೂಡಲೇ ಪ್ರತಿದಾಳಿಯನ್ನು ಸಂಘಟಿಸಿದವು ಎಂದು ಪೊಲೀಸರು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next