Advertisement

ಮದುವೆಗೆ ಒಂದೇ ದಿನ ರಜೆ: ಡಿಸಿಗೆ ಸಚಿವರ ಶ್ಲಾಘನೆ

01:00 AM Mar 07, 2019 | Team Udayavani |

ಉಡುಪಿ: ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಬುಧವಾರ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ತ್ತೈಮಾಸಿಕ ಕೆಡಿಪಿ ಸಭೆ ಜರಗಿತು. 

Advertisement

ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ಒಂದು ದಿನ ಮಾತ್ರ ಕಚೇರಿಗೆ ರಜೆ ಹಾಕಿ ಮಾದರಿಯಾಗಿ¨ªಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಮೆಚ್ಚುಗೆ ಸೂಚಿಸಿದರು.

ಬುಧವಾರ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಸಚಿವರು, ಹೆಪ್ಸಿಬಾ ರಾಣಿ ಅವರು ತಮ್ಮ ಮದುವೆಗೆ ಕೇವಲ ಒಂದು ದಿನ ರಜೆ ಹಾಕಿ ಕರ್ತವ್ಯಕ್ಕೆ ಹಾಜರಾಗಿ¨ªಾರೆ.  ಜಿಲ್ಲಾಡಳಿತದ ಮುಖ್ಯಸ್ಥರಾಗಿರುವ ಅವರ ಕರ್ತವ್ಯ ನಿಷ್ಠೆ ಮಾದರಿಯಾಗಿದೆ ಎಂದು ಶುಭಾಶಯ ಕೋರಿದರು. 

ಜಿಲ್ಲಾಡಳಿತದ ಅತ್ಯುನ್ನತ ಮೂರು ಹು¨ªೆಗಳಾದ ಡಿಸಿ, ಸಿಇಒ, ಎಸ್‌ಪಿ ಹು¨ªೆಗಳನ್ನು ಮಹಿಳೆಯರೇ ಅಲಂಕರಿಸಿರುವುದು ಅತೀವ ಸಂತಸ ತಂದಿದೆ ಎಂದು ಸಚಿವೆ ಜಯಮಾಲಾ ಹೇಳಿದರು. ಶಾಸಕ ಲಾಲಾಜಿ ಮೆಂಡನ್‌ ಅವರೂ ಜಿಲ್ಲಾಧಿಕಾರಿಗಳಿಗೆ ಶುಭ ಕೋರಿದರು.

ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿ.ಪಂ. ಸಿಇಒ ಸಿಂಧು ರೂಪೇಶ್‌, ಎಸ್ಪಿ ನಿಶಾ ಜೇಮ್ಸ್‌ ಉಪಸ್ಥಿತರಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next