Advertisement

ಕೊಳ್ಳೇಗಾಲ :ಪಾರ್ಥೇನಿಯಂ ಗಿಡಗಳ ಮಧ್ಯ ಗಾಂಜಾ ಬೆಳದವನ ಬಂಧನ

10:37 PM Jun 17, 2022 | Team Udayavani |

ಕೊಳ್ಳೇಗಾಲ : ಜಮೀನೊಂದರಲ್ಲಿ ಪಾರ್ಥೇನಿಯಂ ಗಿಡಗಳ ಮಧ್ಯ ಆಕ್ರಮವಾಗಿ ಗಾಂಜಾ ಗಿಡ ಬೆಳೆಸಿ ಮಾರಾಟ ಮಾಡುತ್ತಿದ್ದ ವೆಕ್ತಿಯನ್ನು ಪೊಲೀಸರು ತಾಲ್ಲೂಕಿನ ಧನಗರೆ ಗ್ರಾಮದಲ್ಲಿ ಶುಕ್ರವಾರ ಬಂಧಿಸಿದ್ದಾರೆ.

Advertisement

ಗ್ರಾಮದ ಬಸವರಾಜು (60) ಎಂಬಾತನೇ ಗಾಂಜಾ ಗಿಡ ಬೆಳಸಿ ಆಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದಾನೆ.

ಖಚಿತ ಮಾಹಿತಿ ಮೇರೆಗೆ ಡಿವೈಎಸ್ಪಿನಾಗರಾಜು . ಸಿಪಿಐ ಶಿವರಾಜು ಆರ್. ಮುದ ಹೊಳಲು. ಪಿಎಸ್ಐ ಮಂಜುನಾಥ್, ಸಿಬ್ಬಂದಿಗಳಾದ ವಿರೇಂದ್ರ. ಶಿವಪ್ರಸಾದ್ ಇತರರು ದಾಳಿ ನಡೆಸಿ ಆರೋಪಿ ಬಳಿ ಇದ್ದ 500 ಗ್ರಾಂ ಒಣ ಗಾಂಜಾ ವಶಪಡಿಸಿಕೊಂಡು ಪುಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next