Advertisement

Kannada Cinema: ಒನ್ಸ್‌ ಮೋರ್‌ ಶ್ರಾವಣಿ ಸುಬ್ರಮಣ್ಯ

02:49 PM Dec 31, 2023 | Team Udayavani |

ಗಣೇಶ್‌ ಹಾಗೂ ಅಮೂಲ್ಯ ನಾಯಕ-ನಾಯಕಿಯಾಗಿದ್ದ “ಶ್ರಾವಣಿ ಸುಬ್ರಮಣ್ಯ’ ಚಿತ್ರ ಒಂದು ಫ್ಯಾಮಿಲಿ ಡ್ರಾಮಾವಾಗಿ ಹಿಟ್‌ಲಿಸ್ಟ್‌ ಸೇರಿತ್ತು. ಆ ಚಿತ್ರ ಬಿಡುಗಡೆಯಾಗಿ ಡಿಸೆಂಬರ್‌ 27ಕ್ಕೆ ಹತ್ತು ವರ್ಷ ತುಂಬಿದೆ. ಇದೇ ಖುಷಿಗೆ ನಿರ್ಮಾಪಕ ಕೆ.ಎ.ಸುರೇಶ್‌ ಹೊಸ ಸಿನಿಮಾವೊಂದನ್ನು ಅನೌನ್ಸ್‌ ಮಾಡಿದ್ದಾರೆ.

Advertisement

ಆ ಚಿತ್ರಕ್ಕೆ “ಒನ್ಸ್‌ ಮೋರ್‌ ಶ್ರಾವಣಿ ಸುಬ್ರಮಣ್ಯ’ ಎಂದು ಟೈಟಲ್‌ ಇಡಲಾಗಿದೆ. ಅಂದು “ಶ್ರಾವಣಿ ಸುಬ್ರಮಣ್ಯ’ ಸಿನಿಮಾವನ್ನು ನಿರ್ದೇಶಿಸಿದ್ದ ಮಂಜು ಸ್ವರಾಜ್‌ ಅವರೇ ಈ ಚಿತ್ರಕ್ಕೂ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ.

ಈಗಾಗಲೇ ಚಿತ್ರತಂಡ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿದೆ. ಹೊಸ ಚಿತ್ರ ಕೂಡಾ ಪಕ್ಕಾ ಯೂತ್‌ ಫ‌ುಲ್‌ ಆಗಿದ್ದು, ನವ ನಟ-ನಟಿಯರು ಈ ಚಿತ್ರದಲ್ಲಿ ನಟಿಸಲಿದ್ದಾರೆ. 20 ವರ್ಷದವರು ಈ ಚಿತ್ರದಲ್ಲಿ ನಟಿಸಲು ಅರ್ಜಿ ಸಲ್ಲಿಸಬಹುದು ಎಂದು ತಂಡ ಹೇಳಿಕೊಂಡಿದೆ. ಹೊಸ ವರ್ಷದಲ್ಲಿ ಚಿತ್ರೀಕರಣ ಪ್ರಾರಂಭಿಸಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ

Advertisement

Udayavani is now on Telegram. Click here to join our channel and stay updated with the latest news.

Next