Advertisement

ಜಮ್ಮು-ಕಾಶ್ಮೀರದ ಬೆಳವಣಿಗೆಯಿಂದ ಪಾಕ್ ನ ಯೋಜನೆ ಬುಡಮೇಲಾಗುತ್ತಿದೆ: ಎಸ್. ಜಯಶಂಕರ್

09:58 AM Oct 03, 2019 | Mithun PG |

ವಾಷಿಂಗ್ಟನ್: ಜಮ್ಮು ಕಾಶ್ಮೀರದಲ್ಲಿನ ಅಭಿವೃದ್ದಿಯನ್ನು ಭಾರತ  ಉನ್ನತ ಮಟ್ಟಕ್ಕೇರಿಸಿದರೆ, 70 ವರ್ಷಗಳಿಂದ ಪಾಕಿಸ್ಥಾನ ಮಾಡುತ್ತಿರುವ ಎಲ್ಲಾ ಯೋಜನೆಗಳು ತಲೆಕೆಳಗಾಗುತ್ತವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜಯಶಂಕರ್ ಅಭಿಪ್ರಾಯಪಟ್ಟಿದ್ದಾರೆ.

Advertisement

ವಾಷಿಂಗ್ಟನ್ ನಲ್ಲಿ ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರ ಕಣಿವೆಯಲ್ಲಿ ಮೊಬೈಲ್ ನೆಟ್ ವರ್ಕ್ ಗಳನ್ನು ಸ್ಥಗಿತಗೊಳಿಸಿರುವುದು ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ದುರುಪಯೋಗವನ್ನು ತಡೆಗಟ್ಟಲು ಮತ್ತು ಯಾವುದೇ ರೀತಿಯ ಪ್ರಾಣ ಹಾನಿಯಾಗದಂತೆ ನೋಡಿಕೊಳ್ಳಲು. ಕಾಶ್ಮೀರದಲ್ಲಿ 70 ವರ್ಷಗಳಿಂದ ಪಾಕ್ ಪಟ್ಟಾಭದ್ರಾ ಹಿತಾಸಕ್ತಿಯನ್ನು ಬೆಳೆಸಲು ಯತ್ನಿಸುತ್ತಿದೆ. ಯಾವುದೇ ವಿಷಯದಲ್ಲಿ ಯಥಾ ಸ್ಥಿತಿಯನ್ನು ಬದಲಾಯಿಸಿದಾಗ ಬಹಳಷ್ಟು ಅಪಾಯ ಉಂಟಾಗುತ್ತದೆ. ಅದರ ಜೊತೆಗೆ ಅಪಾರ ಪ್ರತಿಕ್ರೀಯೆಗಳು ಬರುತ್ತವೆ ಎಂದು 370 ನೇ ವಿಧಿಯ ರದ್ದತಿಯನ್ನು ಉಲ್ಲೇಖಿಸಿ ಮಾತನಡಿದರು.

ಕಾಶ್ಮೀರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಎಲ್ಲಾ ರೀತಿಯಲ್ಲೂ ಶ್ರಮಿಸಿಲಾಗುತ್ತಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನರು ಒಂದಲ್ಲಾ ಒಂದು ದಿನ ಭಾರತದತ್ತ ಮುಖ ಮಾಡುತ್ತಾರೆ. ಗಡಿರೇಖೆಯಯಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ನಿಯಂತ್ರಿಸಲು ಭಾರತ ತಕ್ಕ ಕ್ರಮ ಕೈಗೊಳ್ಳುತ್ತಿದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next