Advertisement

ತೆರೆಮೇಲೆ ಕೇಳಿಸಲಿದೆ ರೈತರ “ಕೂಗು’

10:31 AM Mar 13, 2020 | Lakshmi GovindaRaj |

ಕರ್ನಾಟಕದ ರೈತರ ಬದುಕು, ಬವಣೆಗಳನ್ನು ಬಣ್ಣಸುವ ಮತ್ತೂಂದು ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಅಂದಹಾಗೆ ಆ ಚಿತ್ರದ ಹೆಸರು “ಕೂಗು’. ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ರೈತರು ಎದುರಿಸುತ್ತಿರುವ ಸಮಸ್ಯೆಗಳು, ಅವರ ಜೀವನದ ನೈಜ ಚಿತ್ರಣವನ್ನು ಇಟ್ಟುಕೊಂಡು ಈ ಚಿತ್ರ ಮಾಡಲಾಗಿದೆ ಎನ್ನುತ್ತಿದೆ ಚಿತ್ರತಂಡ.

Advertisement

“ಭಾಸ್ಕರ್‌ ಫಿಲಂಸ್‌’ ಲಾಂಛನದಲ್ಲಿ ಡಾ. ಕೆ. ಪದ್ಮನಾಭನ್‌ ನಿರ್ಮಿಸುತ್ತಿರುವ “ಕೂಗು’ ಚಿತ್ರವನ್ನು ಈಗಾಗಲೇ ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್‌ ಮಂಡಳಿ ಚಿತ್ರಕ್ಕೆ ಯಾವುದೇ ಕಟ್ಸ್‌ ಇಲ್ಲದೆ, ಬಿಡುಗಡೆಗೆ ಹಸಿರು ನಿಶಾನೆ ತೋರಿಸಿದೆ.

ಡಾ. ಕೆ. ಪದ್ಮನಾಭನ್‌, ಸಂಗೀತಾ, ವರ್ಷ, ದತ್ತ, ಅಶೋಕ್‌ ಡಾಬಾ, ಧನಂಜಯ ಸ್ವಾಮಿ ಕುಣಿಗಲ್‌, ನಾಗಮಂಗಲ ಶಾಸಕ ಸುರೇಶ್‌ ಗೌಡ ಮೊದಲಾದವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಆರ್‌. ರಂಗನಾಥ್‌ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ಎ.ಟಿ ರವೀಶ್‌ ಸಂಗೀತ ಸಂಯೋಜಿಸಿದ್ದು, ಚಂದ್ರಣ್ಣ ಛಾಯಾಗ್ರಹಣ, ಶ್ರೀನಿವಾಸ್‌ ಪಿ. ಬಾಬು ಸಂಕಲನ ಕಾರ್ಯವಿದೆ.

ಚಿತ್ರಕ್ಕೆ ಸೋಸಲೆ ಗಂಗಾಧರ ಸಾಹಿತ್ಯ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಜಾಲಿ ಬಾಸ್ಟಿನ್‌, ವೇಲು ಸಾಹಸ, ಇಜಾದ್‌ ಸರ್ದಾರಿಯಾ ನೃತ್ಯ ನಿರ್ದೆಶನವಿದೆ. ಸದ್ಯ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ “ಕೂಗು’ ಚಿತ್ರತಂಡ, ಇದೇ ಏಪ್ರಿಲ್‌ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಆಲೋಚನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next