Advertisement

RJD ನಾಯಕ ತೇಜಸ್ವಿ ಯಾದವ್ ವಿರುದ್ಧ ಕಿಡಿ ಕಾರಿದ ಪ್ರಶಾಂತ್ ಕಿಶೋರ್

05:39 PM Aug 25, 2024 | Team Udayavani |

ಪಾಟ್ನಾ: ”ಜಾತಿ, ಸುಲಿಗೆ, ಮದ್ಯ ಮಾಫಿಯಾ, ಅಪರಾಧದ ಬಗ್ಗೆ ಮಾತನಾಡಿದರೆ ಒಪ್ಪಬಹುದು. ಆದರೆ ತೇಜಸ್ವಿ ಯಾದವ್ ಅಭಿವೃದ್ಧಿ ಮಾದರಿಯನ್ನು ಚರ್ಚಿಸಿದರೆ ಅದು ನಗು ತರಿಸುತ್ತದೆ” ಎಂದು ಜನ್ ಸುರಾಜ್ ಮುಖ್ಯಸ್ಥ ಪ್ರಶಾಂತ್ ಕಿಶೋರ್(ಆ25) ಭಾನುವಾರ ಕಿಡಿ ಕಾರಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಶಾಂತ್ ಕಿಶೋರ್ ”ತೇಜಸ್ವಿ ಯಾದವ್ ಅವರು ಕಳೆದ 15 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ, ಅವರಿಗೆ ಜಿಡಿಪಿ ಮತ್ತು ಜಿಡಿಪಿ ಬೆಳವಣಿಗೆ ಏನೆಂದು ತಿಳಿದಿಲ್ಲ, ಆದರೆ ಬಿಹಾರದ ಅಭಿವೃದ್ಧಿಯ ಕಥೆಯ ಬಗ್ಗೆ ಮಾತನಾಡುತ್ತಿದ್ದಾರೆ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಬಿಹಾರದ ಅಪರಾಧದ ವಿಚಾರಕ್ಕೆ ಬಂದರೆ, ಆರು ತಿಂಗಳ ಹಿಂದೆ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿದ್ದಾಗ, ಬಿಹಾರ ಅವರಿಗೆ ಸ್ವಿಟ್ಜರ್ಲೆಂಡ್ ಆಗಿತ್ತು. ಆರು ತಿಂಗಳ ನಂತರ ಬಿಹಾರ ಗಟಾರವಾಯಿತು.ಇಂದು ನಿತೀಶ್ ಕುಮಾರ್ ಮಹಾಘಟಬಂಧನ್‌ಗೆ ಸೇರಿದರೆ, ಬಿಹಾರ ಮತ್ತೆ ಅವರಿಗೆ ಅದ್ಭುತವಾಗಿ ಕಾಣಿಸುತ್ತದೆ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಪ್ರಶಾಂತ್ ಕಿಶೋರ್ ಅವರು ಮುಂದಿನ ವಿಧಾನ ಸಭಾ ಚುನಾವಣೆಗೆ ಪಕ್ಷ ಸಂಘಟನಾ ಕಾರ್ಯದಲ್ಲಿ ನಿರತರಾಗಿದ್ದು ಎನ್ ಡಿಎ ಮತ್ತು ಆರ್ ಜೆಡಿ ವಿರುದ್ಧ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next