Advertisement

ದ್ವೇಷದ ಭಾಷಣ ನಿಲ್ಲಿಸಿ: ಸುಪ್ರೀಂ ಕೋರ್ಟ್‌ ಸೂಚನೆ

06:54 PM Apr 26, 2022 | Team Udayavani |

ನವದೆಹಲಿ: ಇದೇ ಬುಧವಾರ ಉತ್ತರಾಖಂಡದ ರೂರ್ಕಿಯಲ್ಲಿ ನಡೆಯಲಿರುವ ಧರ್ಮ ಸಂಸದ್‌ ಕಾರ್ಯಕ್ರಮದಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಯಾವುದೇ ಪ್ರಚೋದನಾಕಾರಿ ಹೇಳಿಕೆಗಳು ಬಾರದಿರುವಂತೆ ಎಚ್ಚರಿಕೆ ವಹಿಸಬೇಕು ಎಂದು ಉತ್ತರಾಖಂಡ ಸರ್ಕಾರದ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್‌ ತಾಕೀತು ಮಾಡಿದೆ.

Advertisement

“ದ್ವೇಷಯುಕ್ತ ಭಾಷಣಗಳನ್ನು ನಿಲ್ಲಿಸದಿದ್ದರೆ, ನಾವು ನಿಮ್ಮನ್ನೇ ಹೊಣೆಗಾರರನ್ನಾಗಿಸಬೇಕಾಗುತ್ತದೆ. ನಿಮ್ಮನ್ನು ನ್ಯಾಯಾಲಯಕ್ಕೆಳೆದು ತರಬೇಕಾಗುತ್ತದೆ” ಎಂದು ನ್ಯಾ.ಎ.ಎಂ. ಖಾನ್ವೀಳ್ಕರ್‌ ನೇತೃತ್ವದ ನ್ಯಾಯಪೀಠ ಎಚ್ಚರಿಸಿದೆ.

ಇದನ್ನೂ ಓದಿ:ಒಂದು ವೇಳೆ ಜನರು ನಾರಾಯಣ ಗುರುಗಳ ಸಂದೇಶ ಪಾಲಿಸಿದ್ದರೆ ದೇಶದಲ್ಲಿ ಒಗ್ಗಟ್ಟು: ಪ್ರಧಾನಿ ಮೋದಿ

ನೆರೆಯ ಹಿಮಾಚಲ ಪ್ರದೇಶದಲ್ಲೂ ಧಾರ್ಮಿಕ ಸಮಾರಂಭದಲ್ಲಿ ಯಾವುದೇ ಧರ್ಮವನ್ನು ನಿಂದಿಸುವಂಥ ಭಾಷಣಗಳನ್ನು ತಡೆಗಟ್ಟಬೇಕು ಎಂದು ಅಲ್ಲಿನ ರಾಜ್ಯ ಸರ್ಕಾರಕ್ಕೂ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next