Advertisement

ವರುಣನ ರುದ್ರ ನರ್ತನ : ಕೊಟ್ಟಿಗೆ ಕುಸಿದು ವೃದ್ಧ ಸಾವು, ಮೊಮ್ಮಗ ಪಾರು

10:57 AM Jul 23, 2021 | Team Udayavani |

ಚಿಕ್ಕಮಗಳೂರು : ರಾಜ್ಯದಲ್ಲಿ ಹಲವೆಡೆ ಸುರಿಯುತ್ತಿರುವ ಭಾರೀ ಮಳೆಗೆ ಅನಾಹುತಗಳು ಸೃಷ್ಟಿಯಾಗುತ್ತಿವೆ. ಇದೇ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲೂಕಿನ ಕ್ಯಾತನಬೀಡು ಗ್ರಾಮದಲ್ಲಿ ಮಳೆಗೆ ಕೊಟ್ಟಿಗೆ ಕುಸಿದು ವೃದ್ಧನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.

Advertisement

ಸಾವಿಗೀಡಾಗಿರುವ ವೃದ್ಧನನ್ನು ಬಸವೇಗೌಡ (65) ಎಂದು ಗುರುತಿಸಲಾಗಿದೆ. ದನಗಳಿಗೆ ಮೇವು ಹಾಕಲು ಹೋಗಿದ್ದಾಗ ಏಕಾಏಕಿ ಕೊಟ್ಟಿಗೆ ಕುಸಿದಿದೆ. ಗೋಡೆಗಳ ಅಡಿ ಸಿಲುಕಿಕೊಂಡ ಕಾರಣ ಬಸವೇಗೌಡ ಪ್ರಾಣಬಿಟ್ಟಿದ್ದಾರೆ.

ಇಷ್ಟೆ ಅಲ್ಲದೆ ತಾತನ ಜೊತೆ ಮೊಮ್ಮಗ ಕೂಡ ಇದ್ದು, ಅದೃಷ್ಟವಶಾತ್ ರಮೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಇನ್ನು ವೃದ್ಧನ ಜೊತೆಗೆ ಮಣ್ಣಿನಡಿ ಸಿಲುಕಿ ಒಂದು ಹಸು ಕೂಡ ಸಾವನ್ನಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದೆ.

Advertisement

Udayavani is now on Telegram. Click here to join our channel and stay updated with the latest news.

Next