Advertisement

Siddapura: ಇಲಿ ಪಾಷಾಣ ತಿಂದು ವೃದ್ಧ ಸಾವು

09:26 PM Aug 20, 2024 | Team Udayavani |

ಸಿದ್ದಾಪುರ: ದೃಷ್ಟಿ ದೋಷದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಇಲಿ ಪಾಷಾಣ ಸೇವಿಸಿ ಮೃತಪಟ್ಟ ಘಟನೆ ನಡೆದಿದೆ.

Advertisement

ಹೊಸಂಗಡಿ ಗ್ರಾಮದ ಕೆರೆಕಟ್ಟೆಯ ಕೃಷ್ಣಯ್ಯ (92) ಮೃತಪಟ್ಟವರು.

ವಾಕರ್‌ ಸಹಾಯದಿಂದ ನಡೆದಾಡುತ್ತಿದ್ದ ಅವರು ಆ. 18ರಂದು ತಮ್ಮ ಹಳೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದರು. ಈ ವಿಚಾರ ಮನೆಯ ಗಮನಕ್ಕೆ ಬಂದ ಕೂಡಲೇ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ. 20ರಂದು ಮೃತಪಟ್ಟರು.

ಪುತ್ರಿ ಜ್ಯೋತಿ ಅವರು ಅಮಾಸೆಬೈಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next