Advertisement

ವೃದ್ಧನ ಅಂತ್ಯಸಂಸ್ಕಾರ ನಡೆಸಿದ ಸಂಘಟನೆ

09:27 AM Jul 31, 2020 | mahesh |

ಕುಂದಾಪುರ: ಕೋವಿಡ್ ಬಾಧಿತರಾಗಿದ್ದ ಮೊಳಹಳ್ಳಿ ಗ್ರಾಮದ 70 ವರ್ಷದ ವೃದ್ಧರೊಬ್ಬರು ಬುಧವಾರ ರಾತ್ರಿ ಮೃತಪಟ್ಟಿದ್ದು, ಅಂತ್ಯಸಂಸ್ಕಾರಕ್ಕೆ ತತ್‌ಕ್ಷಣ ಯಾರೂ ಲಭ್ಯರಾಗದೆ ಇದ್ದಾಗ ಧರ್ಮವನ್ನೂ ಲೆಕ್ಕಿಸದೆ ಪಿಎಫ್ಐ ಸಂಘಟನೆ ಈ ಕಾರ್ಯಕ್ಕೆ ನೆರವಾಗಿದೆ.

Advertisement

ಅವರ ಪತ್ನಿ ಕೂಡ ಕೋವಿಡ್‌ ಪಾಸಿಟಿವ್‌ ಆಗಿ ಆಸ್ಪತ್ರೆಯಲ್ಲಿದ್ದಾರೆ. ದಂಪತಿಗೆ ಮಕ್ಕಳಿಲ್ಲ. ಸಮೀಪದ ಸಂಬಂಧಿಗಳ 2 ಮನೆ ಸೀಲ್‌ಡೌನ್‌ ಆಗಿದೆ. ದೂರದ ಸಂಬಂಧಿಗಳು ತತ್‌ಕ್ಷಣಕ್ಕೆ ಲಭ್ಯರಾಗಲಿಲ್ಲ. ಮೃತದೇಹವನ್ನು ಮುಟ್ಟಲು ಯಾರೂ ಸಿದ್ಧರಿಲ್ಲದ ಸ್ಥಿತಿ ಬಂದಾಗ ವಿಳಂಬಿಸುವುದು ಸರಿಯಲ್ಲ ಎಂದು ಕುಂದಾಪುರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹರಿಪ್ರಸಾದ ಶೆಟ್ಟಿ ಕಾನ್ಮಕ್ಕಿ, ಪಿಎಫ್ಐ ಸಂಘಟನೆಯ ಆಸಿಫ್‌, ಸಿದ್ದಿಕ್‌, ಉಸಾಮಾ, ಸಮೀರ ಅವರು ತಾಲೂಕು ಆರೋಗ್ಯಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆಗಳೊಂದಿಗೆ ಅಂತಿಮ ವಿಧಿವಿಧಾನ ನೆರವೇರಿಸಿದರು.

ಸರಕಾರದ ನಿಯಮಾವಳಿಯಂತೆ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಮತ್ತು ಆಡಳಿತಾಧಿಕಾರಿ ಅಂತ್ಯಸಂಸ್ಕಾರ ಮಾಡಬೇಕಿತ್ತು.ಆದರೆ ಮೊಳಹಳ್ಳಿ ಪಿಡಿಒ ಆ ಕ್ಷಣದಲ್ಲಿ ವೈದ್ಯಾಧಿಕಾರಿಗಳ ಮತ್ತು ಇತರರ ದೂರವಾಣಿ ಕರೆ ಸ್ವೀಕರಿಸಲಿಲ್ಲ ಎಂಬ ಆರೋಪದ ಕುರಿತು, ವೈದ್ಯರ ಜತೆ ಮಾತನಾಡಿದ್ದೇನೆ, ಗ್ರಾಮ ಪಂಚಾಯತ್‌ ವ್ಯಾಪ್ತಿಗೆ ಮೃತದೇಹ ತಂದಾಗ ಅಂತ್ಯಸಂಸ್ಕಾರದ ಮೇಲ್ವಿಚಾರಣೆ ನೋಡಿಕೊಳ್ಳಬೇಕೆಂಬ ಆದೇಶ ಇದೆ. ಅದಕ್ಕೆ ನಾವು ಸಿದ್ಧರಿದ್ದೆವು ಎಂದು ಪ್ರತಿಕ್ರಿಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next