Advertisement

PM ಮೋದಿಗಾಗಿ ಎಡಗೈ ತೋರು ಬೆರಳು ಹರಕೆ ಅರ್ಪಣೆ !

11:41 PM Apr 06, 2024 | Team Udayavani |

ಕಾರವಾರ: ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲೆಂದು ಅಭಿಯಾನಿಯೊಬ್ಬ ಎಡಗೈ ತೋರು ಬೆರಳನ್ನೇ ಕತ್ತರಿಸಿಕೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

Advertisement

ನಗರದ ಸೋನಾರವಾಡಾ ನಿವಾಸಿ ಅರುಣ್‌ ವರ್ಣೇಕರ್‌ (45) ಮೋದಿಯ ಅಪ್ಪಟ ಅಭಿಮಾನಿಯಾಗಿದ್ದು, ಮೋದಿ ಕಲಾಕೃತಿ ಮಾಡಿಕೊಂಡು ಮನೆಯಲ್ಲಿ ಪೂಜಿಸುತ್ತಿದ್ದಾರೆ. ಮೋದಿ 3ನೇ ಸಲ ಪ್ರಧಾನಿ ಆಗಲೆಂದು ಹರಕೆ ಕಟ್ಟಿಕೊಂ ಡಿದ್ದರಂತೆ. ಅದನ್ನು ಚುನಾವಣೆಗೂ ಮುನ್ನವೇ ಅವರು ತೀರಿಸಿದ್ದಾರೆ. 2 ದಿನಗಳ ಹಿಂದೆ ಎಡಗೈ ತೋರು ಬೆರಳನ್ನು ಕತ್ತರಿಸಿ ಮೋದಿ ಹಾಗೂ ದೇವರಿಗೆ ಅರ್ಪಿಸಿದ್ದಾರೆಮನೆಯ ದೇವರ ಗುಡಿಯಲ್ಲಿ ರಕ್ತದಲ್ಲಿ ತಿಲಕ ಹಚ್ಚಿದ್ದಾರೆ.

ಗೋಡೆ ಮೇಲೆ “ಮೋದಿ ಪ್ರಧಾನಿಯಾಗಲಿ. ಕಾಳಿ ಮಾತಾ ಮೋದಿ ರಕ್ಷಾ ಕರೋ. 3ನೇ ಸಲ 378, 378, 378+ ಎಂದು ಬರೆದಿದ್ದಾರೆ’ ಎನ್ನಲಾಗಿದೆ. ಮೋದಿ ಮೌನ ಸ್ವರೂಪಿ, ಯೋಗಿ ಆದಿತ್ಯನಾಥ ಉಗ್ರ ಸ್ವರೂಪಿ. ಮೋದಿ ಬಳಿಕ ಅವರೇ ಪ್ರಧಾನಿಯಾಗಲಿದ್ದಾರೆ ಎಂದು ಅರುಣ್‌ ಹೇಳುತ್ತಾರೆ.

ಅರುಣ್‌ ಅವಿವಾಹಿತ. ಮುಂಬಯಿ ಸಿನೆಮಾ ಇಂಡಸ್ಟ್ರಿ ಯಲ್ಲಿ ಪ್ರೊಡಕ್ಷನ್‌ ಮ್ಯಾನೇಜರ್‌ ಆಗಿದ್ದರಂತೆ. ಈಗ ತಾಯಿ ಒಬ್ಬರೇ ಇರುವ ಕಾರಣ ಕಾರವಾರಕ್ಕೆ ಮರಳಿದ್ದಾರೆ. ಮನೆಯ ದೇವರ ಕೋಣೆ ಡಾ| ಎಪಿಜೆ ಅಬ್ದುಲ್‌ ಕಲಾಂ, ಯೋಗಿ ಆದಿತ್ಯನಾಥ ಮುಂತಾದ ಬಿಜೆಪಿ ನಾಯಕರ ಭಾವಚಿತ್ರ ಗಳಿಂದ ತುಂಬಿ ಹೋಗಿದೆ. ಮೋದಿಯ ಪ್ರತಿಕೃತಿಯನ್ನು ದೇವರಕೋಣೆಯಲ್ಲಿಟ್ಟು ನಿತ್ಯ ಪೂಜೆ ಮಾಡುತ್ತಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next