Advertisement

Chhatrapati ಶಿವಾಜಿ ಕುರಿತು ಆಕ್ಷೇಪಾರ್ಹ ಹೇಳಿಕೆ; ಚರ್ಚ್ ಫಾದರ್ ವಿರುದ್ಧ ಕೇಸ್

06:06 PM Aug 07, 2023 | Team Udayavani |

ಪಣಜಿ:  ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಚಿಖಾಲಿಯ ಚರ್ಚ್‍ನ ಫಾದರ್ ಬೊಲ್ಕ್ಸಾಮ್ ಪರೇರಾ ವಿರುದ್ಧ ವಾಸ್ಕೋ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಶನಿವಾರ ಮಡಗಾಂವ್ ಜಿಲ್ಲಾ ನ್ಯಾಯಾಲಯದಲ್ಲಿ ಬೋಲ್ಮ್ಯಾಕ್ಸ್ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ, ಸೋಮವಾರ ಮಡಗಾಂವ್ ಜಿಲ್ಲಾ ನ್ಯಾಯಾಲಯ ಅವರಿಗೆ ಮಧ್ಯಂತರ ಜಾಮೀನು ನಿರಾಕರಿಸಿದೆ. ಫಾದರ್ ಬೊಲ್ಮ್ಯಾಕ್ಸ್ ಅವರ ಅರ್ಜಿಗೆ ಪ್ರತಿಕ್ರಿಯಿಸಲು ವಾಸ್ಕೋ ಪೊಲೀಸರು ಸಮಯ ಕೇಳಿದ್ದಾರೆ. ಹೀಗಾಗಿ ವಿಚಾರಣೆಯನ್ನು ಇಂದಿಗೆ ಮುಂದೂಡಲಾಗಿದ್ದು, ನಾಳೆ ವಿಚಾರಣೆ ನಡೆಯಲಿದೆ.

ಛತ್ರಪತಿ ಶಿವಾಜಿ ಮಹಾರಾಜರ ಕುರಿತು ಬೊಲ್ಮ್ಯಾಕ್ಸ್ ಪಿರೇರಾ ಹೇಳಿಕೆ ವಿವಾದ ಸೃಷ್ಟಿಸಿತ್ತು. ಶಿವಾಜಿ ಮಹಾರಾಜರು ರಾಷ್ಟ್ರನಾಯಕರೇ ಹೊರತು ದೇವರಲ್ಲ. ಹಿಂದೂಗಳು ಅವರನ್ನು ದೇವರನ್ನಾಗಿ ಮಾಡಿಕೊಂಡಿದ್ದಾರೆ. ಎಂದು ಪಿರೇರಾ ಹೇಳಿದ್ದರು. ಅವರಿಗೆ ಹಿಂದುತ್ವ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು.

ನನ್ನ ಹೇಳಿಕೆಯನ್ನು ವಿರೋಧಿಸಿದ ಬಳಿಕ ಪಿರೇರಾ ಕ್ಷಮೆಯಾಚಿಸಿದ್ದರು. ಆದಾಗ್ಯೂ, ಹಿಂದೂ ಪರ ಸಂಘಟನೆಗಳ ಗುಂಪು ವಾಸ್ಕೋ ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿತ್ತು. ಫಾದರ್ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ವಾಸ್ಕೋ ಪೊಲೀಸರು ಪಿರೇರಾ ವಿರುದ್ಧ ಪ್ರಕರಣ ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next