Advertisement

ಪುನರ್ವಸತಿ ಕೇಂದ್ರದ ರಸ್ತೆಯನ್ನೇ ಅಗೆದ ರೈತ!

12:16 PM Oct 12, 2019 | Team Udayavani |

ಬಾಗಲಕೋಟೆ: ಪುನರ್ವಸತಿ ಕೇಂದ್ರದ ನಿರ್ಮಾಣಕ್ಕೆ ಪೂರ್ಣ ಭೂಮಿ ಸ್ವಾಧೀನಪಡಿಸಿಕೊಳ್ಳದೆ ಸ್ವಲ್ಪ ಭಾಗ ಉಳಿಸಿದ್ದ ಅಧಿಕಾರಿಗಳ ಕ್ರಮಕ್ಕೆ ಬೇಸತ್ತ ಸಂತ್ರಸ್ತ ರೈತರೊಬ್ಬರು, ಪುನರ್ವಸತಿ ಕೇಂದ್ರದ ರಸ್ತೆಗಳನ್ನೇ ಜೆಸಿಬಿ ಯಂತ್ರದ ಮೂಲಕ ಅಗೆದ ಪ್ರಸಂಗ ತಾಲೂಕಿನ ಸಾಳಗುಂದಿಯ ಪುನರ್‌ವಸತಿ ಕೇಂದ್ರದಲ್ಲಿ ಶುಕ್ರವಾರ ನಡೆದಿದೆ.

Advertisement

ತಾಲೂಕಿನ ಸಿಮೀಕೇರಿ ಗ್ರಾಮದ ಬಳಿ (ಕಂಠಿ ರೇಸಾರ್ಟ್‌ ಎದುರು) ಆಲಮಟ್ಟಿ ಹಿನ್ನೀರಿನಿಂದ ಮುಳುಗಡೆಯಾದ ಹಳೆಯ ಸಾಳಗುಂದಿ ಜನರಿಗೆಪುನರ್ವಸತಿ ಕಲ್ಪಿಸಲಾಗಿದೆ. ಅದಕ್ಕಾಗಿ ರೈತರಿಂದ ಭೂಸ್ವಾಧೀನಪಡಿಸಿಕೊಂಡಿದ್ದು, ಮಂಜುನಾಥ ದಳವಾಯಿ ಎಂಬುವವರ ಒಟ್ಟು 4 ಎಕರೆ ಭೂಮಿಯಲ್ಲಿ 28 ಗುಂಟೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳದೇ ಬಿಡಲಾಗಿತ್ತು. 4 ಎಕರೆಯಲ್ಲಿ 3.12

ಎಕರೆ ಸ್ವಾಧೀನಪಡಿಸಿಕೊಂಡು, ಉಳಿದ 28 ಗುಂಟೆ ಹಾಗೆ ಬಿಟ್ಟಿದ್ದರಿಂದ ರೈತ ಮಂಜುನಾಥ ಅವರಿಗೆ ಕೃಷಿ ಮಾಡಲೂ ಆಗುತ್ತಿರಲಿಲ್ಲ. ಸ್ವಾಧೀನಪಡಿಸಿಕೊಂಡರೆ ಒಟ್ಟೂ ಭೂಮಿ ಪಡೆದುಕೊಳ್ಳಿ. ಇಲ್ಲದಿದ್ದರೆ ನನ್ನ ಭೂಮಿ ನನಗೆ ಬಿಟ್ಟುಕೊಡಿ ಎಂದು ರೈತ ಕೇಳಿಕೊಂಡಿದ್ದ.

ಇದಕ್ಕೆ ಯುಕೆಪಿ ಅಧಿಕಾರಿಗಳು ಸ್ಪಂದಿಸಿರಲಿಲ್ಲ. ಹೀಗಾಗಿ ಕಳೆದ ಹಲವು ವರ್ಷಗಳಿಂದ 28 ಗುಂಟೆ ಭೂಮಿ ಹಾಗೆಯ ಉಳಿದಿತ್ತು. ಸ್ವಾಧೀನ ಪಡಿಸಿಕೊಳ್ಳದಿದ್ದರೂ ನನ್ನ 28 ಗುಂಟೆ ಜಾಗೆಯಲ್ಲಿ ರಸ್ತೆ ನಿರ್ಮಿಸಲಾಗಿದೆ ಎಂದು ಆರೋಪಿಸಿರುವ ರೈತ ಮಂಜುನಾಥ, ಶುಕ್ರವಾರ ಬೆಳಗ್ಗೆ ಜೆಸಿಬಿ ಯಂತ್ರದ ಮೂಲಕ ರಸ್ತೆಯನ್ನೇ ಅಗೆದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next