Advertisement

‘ಹಸಿರು’ವರದಕ್ಷಿಣೆ

08:55 AM Jun 25, 2018 | Karthik A |

ಭುವನೇಶ್ವರ: ದೇಶದಲ್ಲಿ ಇಂದಿಗೂ ವರದಕ್ಷಿಣೆಯ ಪಿಡುಗು ಹಲವರ ಬದುಕನ್ನು ನಾಶಗೊಳಿಸುತ್ತಿರುವ ನಡುವೆಯೇ, ಒಡಿಶಾದ ಶಾಲಾ ಶಿಕ್ಷಕರೊಬ್ಬರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರು ತಾವು ಮದುವೆಯಾಗಲಿರುವ ವಧುವಿನ ಅಪ್ಪನಲ್ಲಿ ಹಸಿರು ವರದಕ್ಷಿಣೆಯ ಬೇಡಿಕೆ ಇಟ್ಟಿದ್ದಾರೆ. ಇದೇನೆಂದು ಯೋಚಿಸುತ್ತಿದ್ದೀರಾ? ವರ ಸರೋಜ್‌ ಕಾಂತ ಬಿಸ್ವಾಲ್‌ ಅವರು ತಮಗೆ 1001 ಹಣ್ಣಿನ ಗಿಡಗಳನ್ನು ನೀಡುವಂತೆ ಹೆಣ್ಣಿನ ತಂದೆಗೆ ಕೋರಿಕೊಂಡಿದ್ದಾರೆ. ನಾನು ವರದಕ್ಷಿಣೆ ಪಡೆಯುವುದಿಲ್ಲ ಎಂದು ನಿರ್ಧರಿಸಿದ್ದೆ. ಆದರೆ, ಹೆಣ್ಣಿನ ಅಪ್ಪ ಒತ್ತಾಯ ಮಾಡಿದಾಗ, ಗಿಡಗಳನ್ನೇ ನೀಡುವಂತೆ ಕೋರಿಕೊಂಡೆ ಎಂದಿದ್ದಾರೆ ಬಿಸ್ವಾಲ್‌.

Advertisement
Advertisement

Udayavani is now on Telegram. Click here to join our channel and stay updated with the latest news.

Next