Advertisement

ಮನೆ ಕಳೆದುಕೊಂಡ ದೆಹಲಿಯ ಬಿ.ಎಸ್.ಎಫ್. ಯೋಧನಿಗೆ ಒಡಿಸ್ಸಾ ಮುಖ್ಯಮಂತ್ರಿ 10 ಲಕ್ಷ ರೂ. ನೆರವು

09:56 AM Mar 02, 2020 | Hari Prasad |

ಭುವನೇಶ್ವರ: ದೆಹಲಿ ದಂಗೆಯಲ್ಲಿ ಮನೆ ಕಳೆದುಕೊಂಡಿರುವ ಭಾರತೀಯ ಗಡಿ ಭದ್ರತಾ ಪಡೆಯ ಯೋಧನಿಗೆ ಒಡಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು 10 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.

Advertisement

ಈಶಾನ್ಯ ದೆಹಲಿಯಲ್ಲಿ ಕಳೆದ ಭಾನುವಾರ ಸಿಎಎ ಪರ ಮತ್ತು ವಿರೋಧಿ ಬಣಗಳ ನಡುವೆ ಹುಟ್ಟಿಕೊಂಡ ಘರ್ಷಣೆ ಬಳಿಕ ಕೋಮು ಸ್ವರೂಪವನ್ನು ಪಡೆದುಕೊಂಡು ಗಲಭೆಗೆ ತಿರುಗಿತ್ತು. ಈ ಗಲಭೆಯಲ್ಲಿ ಬಿ.ಎಸ್.ಎಫ್. ಯೋಧ ಮಹಮ್ಮದ್ ಅನೀಸ್ ಅವರ ಮನೆಯನ್ನು ದುಷ್ಕರ್ಮಿಗಳು ಸಂಪೂರ್ಣ ಸುಟ್ಟು ಹಾಕಿದ್ದರು.

ಪ್ರಸ್ತುತ ಯೋಧ ಮಹಮ್ಮದ್ ಅನೀಸ್ ಅವರು ಕರ್ತವ್ಯ ನಿರ್ವಹಿಸುತ್ತಿರುವ 9ನೇ ಬೆಟಾಲಿಯನ್ ಒಡಿಸ್ಸಾದ ನಕ್ಸಲ್ ಪೀಡಿತ ಪ್ರದೇಶವಾಗಿರುವ ಮಾಲ್ಕನ್ ಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.

ಘಟನೆಯ ಕುರಿತಾಗಿ ಮುಖ್ಯಮಂತ್ರಿಯವರು ಖೇದ ವ್ಯಕ್ತಪಡಿಸಿದ್ದಾರೆ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿಗಳ ಪರಿಹಾರ ಧನವನ್ನು ಯೋಧ ಅನೀಸ್ ಅವರಿಗೆ ಘೋಷಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಕಛೇರಿಯ ಪ್ರಕಟನೆ ತಿಳಿಸಿದೆ. ಮಾತ್ರವಲ್ಲದೇ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಯೋಧ ಅನೀಸ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಅವರಿಗೆ ಮಾನಸಿಕ ಸ್ಥೈರ್ಯವನ್ನೂ ತುಂಬಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next