Advertisement

Odisha; ಒಂದೇ ವಿಧಾನಸಭಾ ಕ್ಷೇತ್ರಕ್ಕೆ 3 ಪಕ್ಷಗಳಿಂದ ಒಂದೇ ಕುಟುಂಬದ ಅಭ್ಯರ್ಥಿಗಳು!

01:38 AM May 06, 2024 | Team Udayavani |

ಭುವನೇಶ್ವರ: ಚುನಾವಣೆ ಎನ್ನುತ್ತಿದ್ದಂತೆಯೇ ಪಕ್ಷಗಳ ನಡುವೆ ಪೈಪೋಟಿ ನಡೆಯುವುದನ್ನು ನೋಡಿರುತ್ತೇವೆ. ಆದರೆ ಒಡಿಶಾದ ರಾಯಗಢ ಜಿಲ್ಲೆಯ ಗುಣುಪುರ್‌ ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷದ ನಡುವೆ ಮಾತ್ರವಲ್ಲ, ಒಂದೇ ಕ್ಷೇತ್ರಕ್ಕೆ ಒಂದೇ ಕುಟುಂಬದ ಮೂವರು ಸದಸ್ಯರ ನಡುವೆಯೇ ಪೈಪೋಟಿ ಏರ್ಪಟ್ಟಿದೆ.

Advertisement

ಹೌದು ಕ್ಷೇತ್ರದ ಹಾಲಿ ಶಾಸಕ, ಬಿಜು ಜನತಾದಳ(ಬಿಜೆಡಿ) ಪಕ್ಷದವರಾದ ರಘುನಾಥ್‌ ಗಾಮಂಗ್‌ ಇದೇ ಕ್ಷೇತ್ರದಲ್ಲಿ ಮರು ಆಯ್ಕೆಗೆ ಕಣಕ್ಕಿಳಿದಿದ್ದಾರೆ. ಅವರ ಪ್ರತಿಸ್ಪರ್ಧಿಯಾಗಿ ಕಾಂಗ್ರೆಸ್‌ನಿಂದ ರಘುನಾಥ್‌ ಅವರ ಮೊಮ್ಮಗ (ಮಗಳ ಮಗ) ಸತ್ಯಜಿತ್‌ ಗಾಮಂಗ್‌ ಸ್ಪರ್ಧಿಸುತ್ತಿದ್ದಾರೆ. ಮತ್ತೂಂದೆಡೆ ಸತ್ಯಜಿತ್‌ನ ಸೋದರ ಸಂಬಂಧಿ ತ್ರಿನಾಥ್‌ ಗಾಮಂಗ್‌ರನ್ನು ಬಿಜೆಪಿ ಇದೇ ಕ್ಷೇತ್ರದಲ್ಲಿ ಕಣಕ್ಕಿಳಿಸಿದೆ. ಹಾಗಾಗಿ ಈ ಕ್ಷೇತ್ರವು ಸಂಬಂಧಿಗಳ ನಡುವಿನ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಒಡಿಶಾದಲ್ಲಿ ಮೇ 13ರಂದು ಲೋಕಸಭೆ ಚುನಾವಣೆ ಜತೆಗೇ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next