Advertisement

ಸೇತುವೆಯ ಮೇಲಿಂದ ನದಿಗೆ ಉರುಳಿದ ಬಸ್: 9 ಸಾವು, 41 ಜನರ ಸ್ಥಿತಿ ಚಿಂತಾಜನಕ

08:37 AM Jan 30, 2020 | Mithun PG |

ಒಡಿಶಾ: ಪ್ರಯಾಣಿಕರಿಂದ ತುಂಬಿದ್ದ ಖಾಸಗಿ ಬಸ್ಸೊಂದು ಸೇತುವೆಯ ಮೇಲಿಂದ ನದಿಗೆ ಉರುಳಿದ ಪರಿಣಾಮ 9 ಜನರು ದಾರುಣವಾಗಿ ಮೃತಪಟ್ಟು 41 ಜನರು ಗಂಭೀರ ಗಾಯಗೊಂಡ ಘಟನೆ ಗಂಜಂ ಜಿಲ್ಲೆಯ ತಪ್ತಪಾನಿ ಘಾಟಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.

Advertisement

ಈ ದುರ್ಘಟನೆ ಇಂದು ಮುಂಜಾನೆ 3 ಗಂಟೆಯ ವೇಳೆಗೆ ನಡೆದಿದ್ದು ಖಾಸಗಿ ಬಸ್ ಟಿಕ್ರಿ ನಗರದಿಂದ ಬೆರಾಂಪುರ್ ಕಡೆಗೆ ಪ್ರಯಾಣಿಸುತ್ತಿತ್ತು.

ಮುಂಜಾನೆಯ ವೇಳೆ ಬಸ್ ಚಾಲಕ ಬ್ರೇಕ್ ಫೇಲ್ ಆಗಿದೆಯೆಂದು ಕಿರುಚಿಕೊಂಡ. ಅದಾಗಿ ಸ್ವಲ್ಪ ಸಮಯದಲ್ಲೆ ಬಸ್ ನದಿಯೊಳಗೆ ಉರುಳಿ ಬಿದ್ದಿದ್ದೆ ಎಂದು ಗಾಯಗೊಂಡ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ . ಹಲವರ ಸ್ಥಿತಿ ಚಿಂತಾಜನಕವಾಗಿದ್ದು ದಿಗಾಪಹಂಡಿ ಮತ್ತು ಬೆರಾಂಪುರ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next