Advertisement

Odisha; ಸೌರಾಘಾತಕ್ಕೆ 3 ದಿನದಲ್ಲಿ 20 ಮಂದಿ ಸಾವು

12:06 AM Jun 04, 2024 | Team Udayavani |

ಹೊಸದಿಲ್ಲಿ: ಉತ್ತರ ಹಾಗೂ ಮಧ್ಯಭಾರತದಲ್ಲಿ ತಾಪಮಾನ ದಿನೇ ದಿನೆ ಹೆಚ್ಚುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಒಡಿಶಾ ರಾಜ್ಯದಲ್ಲಿ 20 ಮಂದಿ ಸೌರಾಘಾತಕ್ಕೆ ಸಾವನ್ನಪ್ಪಿದ್ದಾರೆ.

Advertisement

ಒಡಿಶಾದಲ್ಲಿ ಬಿಸಿಹವೆಯ ಪ್ರಮಾಣ ಹೆಚ್ಚುತ್ತಲೇ ಇದೆ. ಶುಕ್ರವಾರದಿಂದ ಒಟ್ಟು 99 ಸೌರಾಘಾತದ ಸಾವುಗಳು ಸಂಭವಿಸಿವೆ ಎಂದು ಅಂದಾಜಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆ ಬಳಿಕ 20 ಮಂದಿ ಮಾತ್ರ ಸೌರಾಘಾತಕ್ಕೆ ಮೃತಪಟ್ಟಿದ್ದು, ಇನ್ನೆರಡು ಸಾವುಗಳು ಬೇರೆ ಕಾರಣದಿಂದಾಗಿರುವುದಾಗಿ ತಿಳಿದಿದೆ. ಇನ್ನುಳಿದ ಸಾವುಗಳಿಗೆ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾವಲಿಗಳು ಸಾವು
ಇತ್ತ ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯಲ್ಲಿ ಮಿತಿಮೀರಿದ ತಾಪಮಾನದಿಂದ 24 ಬಾವಲಿಗಳು ಮೃತಪಟ್ಟಿವೆ ಎಂದು ಅರಣ್ಯ ಇಲಾಖೆ ಹೇಳಿದೆ. ಪಾಳಿ ಅರಣ್ಯ ವ್ಯಾಪ್ತಿಯ ಪರ್ಸಾದ ಗ್ರಾಮದ ಕೊಳವೊಂದರ ಬಳಿ ಬಾವಲಿಗಳ ಶವಗಳು ಪತ್ತೆಯಾಗಿವೆ. ಪ್ರಾಥಮಿಕವಾಗಿ ತಾಪ ಹೆಚ್ಚಳದಿಂದ ಪಕ್ಷಿಗಳು ಸತ್ತಿವೆ ಎನ್ನಲಾಗಿದ್ದು, ಉನ್ನತ ತನಿಖೆ ನಡೆಯುತ್ತಿದೆ. ಇದೇ ವೇಳೆ, ದಿಲ್ಲಿಯಲ್ಲೂ ಬಿಸಿ ಹವೆ ಮುಂದುವರಿದಿದ್ದು, ಸೋಮವಾರ 44.7 ಡಿ.ಸೆ. ತಾಪಮಾನ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next