Advertisement

ರಾಜ್ಯೋತ್ಸವಕ್ಕೆ “ಒಡೆಯ’ಟೀಸರ್‌

10:22 AM Oct 30, 2019 | Lakshmi GovindaRaju |

ಎನ್‌.ಸಂದೇಶ್‌ ಅವರು ನಿರ್ಮಿಸುತ್ತಿರುವ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ “ಒಡೆಯ’ ಚಿತ್ರದ ಟೀಸರ್‌ ಕನ್ನಡ ರಾಜ್ಯೋತ್ಸವದಂದು ಬಿಡುಗಡೆಯಾಗಲಿದೆ. ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಡಿಸೆಂಬರ್‌ನಲ್ಲಿ ಚಿತ್ರ ತೆರೆಗೆ ಬರಲಿದೆ. ಎಂ.ಡಿ.ಶ್ರೀಧರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ದರ್ಶನ್‌ ಅಭಿನಯದ “ಪೊರ್ಕಿ’, “ಬುಲ್‌ಬುಲ್‌’ ಚಿತ್ರಗಳನ್ನು ಎಂ.ಡಿ.ಶ್ರೀಧರ್‌ ಅವರು ನಿರ್ದೇಶನ ಮಾಡಿದ್ದರು.

Advertisement

ಈಗ ದರ್ಶನ್‌ ಹಾಗೂ ಶ್ರೀಧರ್‌ ಅವರ ಕಾಂಬಿನೇಷನಲ್ಲಿ “ಒಡೆಯ’ ಚಿತ್ರ ಮೂಡಿಬರುತ್ತಿದೆ. ಅರ್ಜುನ್‌ ಜನ್ಯ ಸಂಗೀತದ ಈ ಚಿತ್ರದ ಹಾಡುಗಳನ್ನು ಜಯಂತ ಕಾಯ್ಕಿಣಿ, ಡಾ.ನಾಗೇಂದ್ರ ಪ್ರಸಾದ್‌, ಕವಿರಾಜ್‌ ಹಾಗೂ “ಬಹದ್ದೂರ್‌’ ಚೇತನ್‌ ಕುಮಾರ್‌ ಬರೆದಿದ್ದಾರೆ. ಕೆ.ಕೃಷ್ಣಕುಮಾರ್‌ ಛಾಯಾಗ್ರಹಣ, ಕೆ.ಎಂ.ಪ್ರಕಾಶ್‌ ಸಂಕಲನ, ಕಲೈ ನೃತ್ಯ ನಿರ್ದೇಶನ ಹಾಗೂ ಜಯ್‌ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.

ಪ್ರಶಾಂತ್‌ ರಾಜಪ್ಪ ಸಂಭಾಷಣೆ ಬರೆದಿದ್ದಾರೆ. ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ನಾಯಕಿಯಾಗಿ ರಾಘವಿ ತಿಮ್ಮಯ್ಯ ಅಭಿನಯಿಸಿದ್ದಾರೆ. ಯಶಸ್‌ ಸೂರ್ಯ, ಪಂಕಜ್‌, ನಿರಂಜನ್‌, ಸಮರ್ಥ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next