Advertisement

Panchayat ಅಭಿವೃದ್ಧಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ, ಜೀವ ಬೆದರಿಕೆ: ದೂರು ದಾಖಲು

08:13 PM Nov 18, 2023 | Team Udayavani |

ಪಡುಬಿದ್ರಿ: ಪಡುಬಿದ್ರಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ಅವರು ನ. 17ರಂದು ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಗ್ರಾ. ಪಂ. ಸದಸ್ಯ ಮಯ್ಯದಿ ಅವರನ್ನು ಕೈಯಿಂದ ದೂಡಿ, ಜೀವಬೆದರಿಕೆ ಒಡ್ಡಿರುವ ಘಟನೆ ನಡೆದಿದೆ. ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಪಂಚಾಯತ್‌ ಸದಸ್ಯ ಮಯ್ಯದಿ ತನ್ನ ಕೆಲಸವನ್ನು ಈಗಲೇ ಮಾಡಿಕೊಡುವಂತೆ ಮಂಜುನಾಥ ಶೆಟ್ಟಿ ಅವರನ್ನು ಒತ್ತಾಯಿಸಿದ್ದಾನೆ. ಪರಿಶೀಲಿಸಿ ಮಾಡಿಕೊಡುವೆ ಎಂದು ಹೇಳಿದಾಗ ಮಾತಿಗೆ ಮಾತು ಬೆಳೆದು ಮಯ್ಯದಿ ಅಧಿಕಾರಿಯನ್ನು ಕೈಯಿಂದ ದೂಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಮಂಜುನಾಥ ಶೆಟ್ಟಿ ಪಡುಬಿದ್ರಿ ಠಾಣೆಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next