Advertisement

Kannada Cinema; ಸಂದೇಶ ಸಾರುವ ‘ಓ ನನ್ನ ಚೇತನ’

05:19 PM Dec 17, 2023 | Team Udayavani |

ನಾಯಕಿ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಅಪೂರ್ವ ಈಗ ನಿರ್ದೇಶಕಿಯಾಗಿದ್ದಾರೆ. ಅದು “ಓ ನನ್ನ ಚೇತನ’ ಚಿತ್ರದ ಮೂಲಕ. ಈ ವಾರ ಚಿತ್ರ ತೆರೆಕಂಡಿದ್ದು, ಒಂದು ಸದಭಿರುಚಿಯ ಚಿತ್ರವಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Advertisement

ಅತಿಯಾದ ಮೊಬೈಲ್‌ ಬಳಕೆಯಿಂದ ಮಕ್ಕಳು ಯಾವ ರೀತಿ ಹಾಳಾಗುತ್ತಿದ್ದಾರೆ, ಇದು ಅವರ ಮೇಲೆ ಬೀರುವ ದುಷ್ಪರಿಣಾಮ ಎಂಥದ್ದು ಎಂಬುದನ್ನು “ಓ ನನ್ನ ಚೇತನ’ ಚಿತ್ರದ ಮೂಲಕ ಕಟ್ಟಿಕೊಡಲಾಗಿದೆ. ಇಲ್ಲಿ ಮಕ್ಕಳ ಜೊತೆಗೆ ಹಿರಿಯರಿಗೂ ಪಾಠವಿದೆ. ಹರಿ ಸಂತು ಓ ನನ್ನ ಚೇತನ ಚಿತ್ರಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಕಥೆ, ಸಂಭಾಷಣೆ ಸನ್ನಿವೇಶಗಳಿಗೆ ಪೂರಕವಾಗಿದೆ. ಮಾಸ್ಟರ್‌ ಪ್ರತೀಕ್‌, ಮಾಸ್ಟರ್‌ ಪ್ರೀತಮ್‌, ಬೇಬಿ ದಾನೇಶ್ವರಿ, ಬೇಬಿ ಡಿಂಪನಾ ಚಿತ್ರದಲ್ಲಿ ನಟಿಸಿದ್ದಾರೆ. ಪ್ರದೀಪ್‌ ವರ್ಮಾ ಸಂಗೀತ. ಗುರುಪ್ರಶಾಂತ್‌ ಛಾಯಾಗ್ರಹಣವಿದೆ.

ಒಂದು ಸಿಂಪಲ್‌ ಕಥೆಯನ್ನು ನೀಟಾಗಿ, ಅರ್ಥವಾಗುವಂತೆ ಕಟ್ಟಿಕೊಡುವ ಮೂಲಕ ಅಪೂರ್ವ ಭವಿಷ್ಯದ ಭರವಸೆ ಮೂಡಿಸಿದ್ದಾರೆ. ಒಂದು ಪ್ರಯತ್ನವಾಗಿ ಮೆಚ್ಚುಗೆ ಪಡೆಯುವ ಸಿನಿಮಾವಿದು.

Advertisement

Udayavani is now on Telegram. Click here to join our channel and stay updated with the latest news.

Next