Advertisement

Khushbu Sundar; ಓ ಮೂರ್ಖ ದ್ರಾವಿಡರೇ!..:ಡಿಎಂಕೆ ವಿರುದ್ಧ ಬಿಜೆಪಿ ನಾಯಕಿಯ ಆಕ್ರೋಶ

03:50 PM Jun 19, 2023 | Team Udayavani |

ಚೆನ್ನೈ: ತನ್ನ ವಿರುದ್ಧ ಕೀಳು ಮಟ್ಟದಲ್ಲಿ ಟೀಕೆ ಮಾಡಿರುವುದಕ್ಕಾಗಿ ಬಿಜೆಪಿ ನಾಯಕಿ, ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯೂ) ಸದಸ್ಯೆ ಖುಷ್ಬು ಸುಂದರ್ ಡಿಎಂಕೆ ವಿರುದ್ಧ ಮತ್ತೆ ಆಕ್ರೋಶ ಹೊರ ಹಾಕಿದ್ದಾರೆ.

Advertisement

ಸೋಮವಾರ ಟ್ವೀಟ್ ಮಾಡಿರುವ ನಟಿ ಖುಷ್ಬು ”ಓ ಮೂರ್ಖ ದ್ರಾವಿಡರೇ! ನಿಮ್ಮ ಮತ್ತು ಪಕ್ಷ ಕಟ್ಟಲು ಪ್ರಾಣ ಕೊಟ್ಟ ಮಹಾನ್ ನಾಯಕ ಕರುಣಾನಿಧಿ ಅವರನ್ನು ಅಪಹಾಸ್ಯ ಮಾಡುವುದನ್ನು ನಿಲ್ಲಿಸಿ. ನೀವು ಪ್ರತೀಕಾರ ಮತ್ತು ದ್ವೇಷದಿಂದ ತುಂಬಿದ್ದೀರಿ ಎಂದು ನನಗೆ ತಿಳಿದಿದೆ. ನಾನು ನಿಮ್ಮ ಪಕ್ಷದ ಭಾಗವಾಗಿದ್ದಾಗಲೂ ನಟಿಯಾಗಿದ್ದೆ. ಹಾಗಾಗಿ ನೀವು ನಾನು ನಟಿ ಎಂದು ನನ್ನನ್ನು ಟ್ರೋಲ್ ಮಾಡಲು ಪ್ರಯತ್ನಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಎಸೆದ ಭಿಕ್ಷೆಯಿಂದ ವಿಜೃಂಭಿಸುವ ನಿಮ್ಮಂತಲ್ಲದೆ ಸ್ವಯಂ ನಿರ್ಮಿತವಾದಂತೆ ನಾನು ನಿಮಗಿಂತ ಹೆಚ್ಚು ಬಲವಾದ ಭುಜಗಳನ್ನು ಹೊಂದಿದ್ದೇನೆ. ನನ್ನ ಹೆಸರನ್ನು ಲಗತ್ತಿಸಿದಾಗ ಮಾತ್ರ ನೀವು ಸುದ್ದಿಯಾಗಬಹುದು ಎಂದು ನಾನು ನಿಮ್ಮ ಅವಸ್ಥೆಯನ್ನು ಅರ್ಥಮಾಡಿಕೊಂಡಿದ್ದೇನೆ. ಆದರೆ ನಮ್ಮ ಮುಖ್ಯಮಂತ್ರಿ, ನಿಮ್ಮ ನಾಯಕ ಸ್ಟಾಲಿನ್ ಕೂಡ ಒಬ್ಬ ನಟ ಮತ್ತು ಅದರಲ್ಲಿ ವಿಫಲರಾಗಿದ್ದಾರೆ ಎಂಬುದನ್ನು ನೆನಪಿಡಿ” ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಖುಷ್ಬು ಸುಂದರ್ ವಿರುದ್ಧ ಡಿಎಂಕೆ ವಕ್ತಾರ ಶಿವಾಜಿ ಕೃಷ್ಣಮೂರ್ತಿ ವಿವಾದಾತ್ಮಕ ಹೇಳಿಕೆ ನೀಡಿ ಆಕ್ರೋಶಕ್ಕೆ ಗುರಿಯಾದ ಬಳಿಕ ಪಕ್ಷದಿಂದ ವಜಾ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next