Advertisement

Valmiki Award: ನ್ಯಾ| ಎನ್‌.ವೈ.ಹನುಮಂತಪ್ಪ ಸಹಿತ 8 ಮಂದಿಗೆ ವಾಲ್ಮೀಕಿ ಪ್ರಶಸ್ತಿ

11:11 PM Oct 27, 2023 | Team Udayavani |

ಬೆಂಗಳೂರು: ನಿವೃತ್ತ ನ್ಯಾ| ಎನ್‌.ವೈ. ಹನುಮಂತಪ್ಪ ಸಹಿತ 8 ಮಂದಿ ಗಣ್ಯರನ್ನು ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಶನಿವಾರ ನಡೆಯುವ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

Advertisement

ಯುವಜನಸೇವೆ ಮತ್ತು ಕ್ರೀಡಾ ಸಚಿವ ಬಿ.ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಈ ವಿಷಯ ತಿಳಿಸಿದ್ದು, ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ನಡೆಯಲಿದೆ. ಎಂಟು ಸಾಧಕರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನವಾಗಲಿದೆ. ಪ್ರಶಸ್ತಿಯು 5 ಲಕ್ಷ ರೂ. ನಗದು, 20 ಗ್ರಾಂ ಚಿನ್ನದ ಪದಕವನ್ನು ಹೊಂದಿರುತ್ತದೆ ಎಂದು ಹೇಳಿದರು.

ನ್ಯಾಯಾಂಗ ಕ್ಷೇತ್ರದಿಂದ ನಿವೃತ್ತ ನ್ಯಾ| ಎನ್‌.ವೈ. ಹನುಮಂತಪ್ಪ, ಧಾರ್ಮಿಕ ಕ್ಷೇತದಿಂದ ಮಹಾದೇವಮ್ಮ ರಂಗಸ್ವಾಮಿ (ರಾಜನಹಳ್ಳಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪುಣ್ಯಾನಂದ ಪುರಿ ಸ್ವಾಮೀಜಿಯವರ ಮಾತೃಶ್ರೀ), ಶಿಕ್ಷಣ ಕ್ಷೇತ್ರ- ಬೆಳಗಾವಿ ಜಿಲ್ಲೆಯ ರಾಮಣ್ಣ ಮಹಾದೇವ ಗಸ್ತಿ, ಸಮಾಜ ಸೇವೆ – ಹಾಸನದ ಜಿ.ಒ. ಮಹಾಂತಪ್ಪ, ಸಾಮಾಜಿಕ ಸಂಘಟನೆ ಕ್ಷೇತ್ರ- ಮೈಸೂರು ಜಿಲ್ಲೆಯ ಸೋಮಣ್ಣ, ವೈದ್ಯಕೀಯ ಸೇವೆ ಕ್ಷೇತ್ರ- ರಾಯಚೂರು ಜಿಲ್ಲೆಯ ಶಾರದಾ ಪ್ರಭು ಹುಲಿ ನಾಯಕ, ಸಾಹಿತ್ಯ ಕ್ಷೇತ್ರ- ವಿಜಯನಗರ ಜಿಲ್ಲೆಯ ಸುಕನ್ಯಾ ಮಾರುತಿ, ರಂಗಭೂಮಿ ಕ್ಷೇತ್ರ- ಬಳ್ಳಾರಿಯ ಸುಜಾತಮ್ಮ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next