Advertisement

ಸಿಂಧೂರ, ಮಂಗಳಸೂತ್ರ ಧರಿಸಿ ರಥಯಾತ್ರೆಯಲ್ಲಿ ಪಾಲ್ಗೊಂಡ ನುಸ್ರತ್ ಜಹಾನ್

10:12 AM Jul 05, 2019 | Nagendra Trasi |

ಕೋಲ್ಕತಾ:ಮದುವೆ ಬಳಿಕ ಸಂಸತ್ ನಲ್ಲಿ ಸಂಸದೆಯಾಗಿ ಪ್ರಮಾಣವಚನ ಸ್ವೀಕರಿಸುವ ವೇಳೆ ಹಣೆಗೆ ಸಿಂಧೂರ, ಕುತ್ತಿಗೆಯಲ್ಲಿ ಮಾಂಗಲ್ಯ ಧರಿಸಿದ್ದ ನುಸ್ರತ್ ಜಹಾನ್ ವಿರುದ್ಧ ಮುಸ್ಲಿಂ ಮೌಲ್ವಿಗಳು ವಾಗ್ದಾಳಿ ನಡೆಸಿದ್ದರು. ಇದೀಗ ಕೋಲ್ಕತಾದಲ್ಲಿ ಸೋಮವಾರ ನಡೆದ ವಾರ್ಷಿಕ ರಥಯಾತ್ರೆಯಲ್ಲಿ ಮಾಂಗಲ್ಯ ಧರಿಸಿ, ಹಣೆಗೆ ಸಿಂಧೂರ ಇಟ್ಟುಕೊಂಡು ಕಾಣಿಸಿಕೊಳ್ಳುವ ಮೂಲಕ ನಾವೆಲ್ಲ ಒಂದೇ ಎಂಬ ಸಂದೇಶವನ್ನು ರವಾನಿಸಿದ್ದಾರೆ.

Advertisement

ಇಸ್ಕಾನ್ ಸಂಸ್ಥೆ ಮಿಂಟೋ ಪಾರ್ಕ್ ನಲ್ಲಿ ಆಯೋಜಿಸಿದ್ದಿ ರಥಯಾತ್ರೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮೀಪ ನುಸ್ರತ್ ಜಹಾನ್ ಕಾಣಿಸಿಕೊಂಡಿದ್ದರು. ದೇಶದ ಯುವ ಸಮುದಾಯ ಜಾತ್ಯತೀತತೆ ಮತ್ತು ಮಾನವೀಯತೆ ಜೊತೆಗೆ ನಿಲ್ಲಬೇಕಾಗಿದೆ ಎಂದು ನುಸ್ರತ್ ಈ ಸಂದರ್ಭದಲ್ಲಿ ಹೇಳಿದರು.

ದೀದಿ(ಮಮತಾ ಬ್ಯಾನರ್ಜಿ) ಈದ್ ಗೆ ಬಂದಿದ್ದರು. ಮತ್ತು ಅವರು ಎಲ್ಲರೊಂದಿಗೂ ಬೆರೆಯುತ್ತಾರೆ. ಇದರದಲ್ಲಿ ಯಾವುದೇ ರಾಜಕೀಯ ಇಲ್ಲ. ಇದು ವಿಶ್ವಾಸ ಮತ್ತು ನಂಬಿಕೆಯದ್ದಾಗಿದೆ. ಹೀಗಾಗಿ ರಾಜಕೀಯ ಮತ್ತು ಧರ್ಮ ಬೇರೆ, ಬೇರೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ನುಸ್ರತ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next