Advertisement

ಎನ್‌ಪಿಎಸ್‌ ಪದ್ದತಿ ರದ್ದತಿಗೆ ಆಗ್ರಹ

12:22 PM Mar 30, 2022 | Team Udayavani |

ಜೇವರ್ಗಿ: ಎನ್‌ಪಿಎಸ್‌ ಪದ್ಧತಿ ರದ್ದು ಮಾಡುವಂತೆ ಒತ್ತಾಯಿಸಿ ಅಂಚೆ ನೌಕರರರ ಸಂಘಗಳ ಜಂಟಿ ಕ್ರಿಯಾ ಸಮಿತಿ ವತಿಯಿಂದ ಮಂಗಳವಾರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

Advertisement

ಎನ್‌ಪಿಎಸ್‌ ಪದ್ಧತಿ ರದ್ದು ಮಾಡಿ ಒಪಿಎಸ್‌ ಪದ್ಧತಿ ಮರು ಜಾರಿ ಮಾಡಬೇಕು. ಅಂಚೆ ಇಲಾಖೆ ಖಾಸಗೀಕರಣ ಕೈಬಿಡಬೇಕು. ಅಂಚೆ ನೌಕರರ ವೇತನ ಹೆಚ್ಚಳ ಮಾಡಬೇಕು. ಗರಿಷ್ಠ ರಜೆ ಮಂಜೂರಿ ಮಾಡಬೇಕು ಎಂದು ಒತ್ತಾಯಿಸಿದರು.

ಅಂಚೆ ನೌಕರರ ಸಂಘದ ಶಿವರಾಜ ಪಾಟೀಲ ಕೆಲ್ಲೂರ, ವಿಶ್ವನಾಥ ಪಾಟೀಲ ಹರನೂರ, ವೀರಣ್ಣ ಹುಗ್ಗಿ ಮುದವಾಳ ಬಿ., ಶಿವಕುಮಾರ ರೇವನೂರ, ರಾಜಣ್ಣ ಯಾಳವಾರ, ಶರಣಗೌಡ ಸಾಥಖೇಡ, ಗುಂಡಪ್ಪ ಸಾಥಖೇಡ, ಪ್ರತಿಭಾ ಮದರಿ, ಅಕ್ಷತಾ ಇಜೇರಿ, ಬಾಪುಗೌಡ ಕಟ್ಟಿಸಂಗಾವಿ, ಕಲ್ಯಾಣಿ ಜೇರಟಗಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next