Advertisement

ಅಡ್ಕಾರಿನಲ್ಲಿ ಲಾರಿ ಟೈರ್‌ ಸ್ಪೋಟ : ಅಪಾಯದಿಂದ ಪಾರು

10:23 PM Oct 18, 2019 | Naveen |

ಸುಳ್ಯ : ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಜಾಲ್ಸೂರು ಸಮೀಪದ ಮಾವಿನಕಟ್ಟೆ ಬಳಿ ಶುಕ್ರವಾರ ಸಂಜೆ ಸಂಚರಿಸುತ್ತಿದ್ದ ಲಾರಿ ಟೈರ್‌ ಸ್ಟೋಟಗೊಂಡಿದ್ದು ,  ಯಾವುದೇ ಅಪಾಯ ಸಂಭವಿಸಿಲ್ಲ.

Advertisement

ಗುರುವಾರದಂದು ಇದೇ ಸ್ಥಳದಲ್ಲಿ ಕಾರು ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು, ಈ ಘಟನೆ ನಡೆದು ಕೆಲ ಗಂಟೆಗಳಲ್ಲಿ ಇದೀಗ ಮತ್ತೆ ಅಪಘಾತ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ ಕೊಂಡೊಯ್ಯುತ್ತಿದ್ದ  ಲಾರಿ ಟೈರ್‌ ಸ್ಪೋಟಗೊಂಡಿತ್ತು. ಯಾವುದೇ ತೊಂದರೆ ಉಂಟಾಗದೆ ಭಾರೀ ಅನಾಹುತವೊಂದು ತಪ್ಪಿದೆ.

ಇದೇ ಸ್ಥಳದಲ್ಲಿ ಒಂದೇ ತಿಂಗಳಲ್ಲಿ ನಾಲ್ಕು ವಾಹನ ಅಪಘಾತ ಸಂಭವಿಸಿ ಒಟ್ಟು 7 ಮಂದಿ ಜೀವ ಕಳೆದುಕೊಂಡಿದ್ದಾರೆ. ಪದೇ- ಪದೇ ಈ ಸ್ಥಳದಲ್ಲಿ ಅಪಘಾತ ಸಂಭವಿಸುತ್ತಿರುವುದು ಸವಾರರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next