Advertisement

ಶಾ, ಯೋಗಿ ಬಳಿಕ ಚೌಹಾಣ್‌ ಹೆಲಿಕಾಪ್ಟರ್‌ಗೆ ಅನುಮತಿ ನಿರಾಕರಣೆ

10:58 AM Feb 06, 2019 | Team Udayavani |

ಹೊಸದಿಲ್ಲಿ : ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮತ್ತು ಉ.ಪ್ರ. ಸಿಎಂ ಯೋಗಿ ಆದಿತ್ಯನಾಥ್‌ ಬಳಿಕ ಇದೀಗ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಹೆಲಿಕಾಪ್ಟರ್‌ ಗೆ ಪಶ್ಚಿಮ ಬಂಗಾಲದಲ್ಲಿ ಇಳಿಯಲು ಅನುಮತಿ ನಿರಾಕರಿಸಲಾಯಿತು.

Advertisement

ಶಿವರಾಜ್‌ ಸಿಂಗ್‌ ಚೌಹಾಣ್‌ ಅವರಿಂದು ಬುಧವಾರ ಮುರ್ಷಿದಾಬಾದ್‌ ಜಿಲ್ಲೆಯಲ್ಲಿ ಒಂದು ಮತ್ತು ಪಶ್ಚಿಮ ಮಿಡ್ನಾಪುರ ಜಿಲ್ಲೆಯಲ್ಲಿ ಇನ್ನೊಂದು ರಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದರು. 

ಚೌಹಾಣ್‌ ಹೆಲಿಕಾಪ್ಟರ್‌ ಇಳಿಯುವುದಕ್ಕೆ ಜಿಲ್ಲಾಡಳಿತೆ ಅನುಮತಿ ನಿರಾಕರಿಸಿರುವುದನ್ನು ಪಶ್ಚಿಮ ಬಂಗಾಲ ದೃಢಪಡಿಸಿದೆ. ಈ ಪರಿಣಾಮವಾಗಿ ನಾವು ಚೌಹಾಣ್‌ ಅವರ ರಾಲಿಗಳನ್ನು ರದ್ದುಪಡಿಸಿದ್ದೇವೆ ಎಂದು ಅದು ಹೇಳಿದೆ. 

ಇದರ ಬದಲಾಗಿ ಚೌಹಾಣ್‌ ಖರಗ್‌ಪುರ ರಾಲಿಯಲ್ಲಿ ಭಾಗವಹಿಸುವರು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಯಂತನ್‌ಬಸು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next