Advertisement

ಬಂದಿದೆ ಈಗ ‘ಯೋಗಿ ಮ್ಯಾಂಗೋ’

01:08 AM May 08, 2017 | Team Udayavani |

ಲಕ್ನೋ: ಉತ್ತರ ಪ್ರದೇಶದ ಮಾರುಕಟ್ಟೆಗೆ ‘ಯೋಗಿ ಮ್ಯಾಂಗೋ’ ಬಂದಿದೆ. 1957ರಿಂದ ಮಾವಿನ ಹಣ್ಣಿನ ಬೇಸಾಯ ಮಾಡುತ್ತಿರುವ ಕಲೀಮುಲ್ಲಾ (74) ಅವರೇ ಈ ತಳಿಯ ರೂವಾರಿ. ನೈಸರ್ಗಿಕವಾಗಿಯೇ ಅದನ್ನು ಬೆಳೆಸಲಾಗಿದ್ದು, ಅದು ದುಸ್ಸೇರಿ ಮಾವಿನ ತಳಿಯಾಗಿದೆ. ಮಾವಿಗೆ ಜನಪ್ರಿಯ ವ್ಯಕ್ತಿಗಳ ಹೆಸರು ಇರಿಸುವುದರಲ್ಲಿ ಅವರು ಎತ್ತಿದ ಕೈ. ಹಿಂದಿನ ಸಂದರ್ಭಗಳಲ್ಲಿ ನಟಿ ಐಶ್ವರ್ಯಾ ರೈ ಬಚ್ಚನ್‌, ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಹೆಸರನ್ನು ಇಡಲಾಗಿತ್ತು. ಪ್ರಸಿದ್ಧ ಪುರುಷರ ಹೆಸರುಗಳು ಯಾವತ್ತೂ ನೆನಪಲ್ಲಿ ಉಳಿಯಲು ಇಂಥ ಕ್ರಮಕ್ಕೆ ಮುಂದಾಗಿರುವುದಾಗಿ ಅವರ ಹೇಳಿಕೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next