Advertisement

ಕುಖ್ಯಾತ  ರೌಡಿಯ  ಬಂಧನ 

12:41 PM Feb 02, 2018 | Team Udayavani |

ಮಂಗಳೂರು: ಅಂತಾರಾಜ್ಯ ರೌಡಿ, ಕಾಸರಗೋಡು ಜಿಲ್ಲೆಯ  ಬಾಯಾರು  ಅಟ್ಟೆಗೋಳಿಯ ಮಹ ಮ್ಮದ್‌ ರಫೀಕ್‌ ಯಾನೆ ನಪ್ಪಾಟೆ ರಫೀಕ್‌ (29) ನನ್ನು  ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳ ಹಾಗೂ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.  

Advertisement

ಖಚಿತ ಮಾಹಿತಿ ಮೇರೆಗೆ ಈತನನ್ನು ತಲಪಾಡಿಯ  ಕೆಸಿ ರೋಡ್‌ ಬಳಿ ದಸ್ತಗಿರಿ ಮಾಡಲಾಗಿದೆ. ಈತನ ಮೇಲೆ ತೊಕ್ಕೊಟ್ಟು ಸಮೀಪದ ಸೋಮೇಶ್ವರ ಗ್ರಾಮದ ಕುತ್ತಾರು ಪದವಿನ ಸಿಲಿಕೋನಿಯ ಅಪಾರ್ಟ್‌ಮೆಂಟಿನ  ಫ್ಲ್ಯಾಟ್‌ಗೆ  ಅಕ್ರಮ ಪ್ರವೇಶಮಾಡಿ ಮಹಿಳೆಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಒಡ್ಡಿರುವ ಬಗ್ಗೆ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಈತನ ವಿರುದ್ಧ  ಮೂರು ಕೊಲೆ, ಕೊಲೆ ಯತ್ನ, ಕಿಡ್ನಾಪ್‌  ಸಹಿತ ಒಟ್ಟು 13 ಪ್ರಕರಣಗಳು ದಾಖಲಾಗಿರುತ್ತವೆ.  ಪುತ್ತೂರು ನಗರ ಹಾಗೂ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ದಸ್ತಗಿರಿ ವಾರಂಟ್‌ ಬಾಕಿ ಇದ್ದು, ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. 

ಮಂಗಳೂರು ದಕ್ಷಿಣ ರೌಡಿ ನಿಗ್ರಹ ದಳದ ಎ.ಸಿ.ಪಿ. ರಾಮರಾವ್‌ ಮತ್ತು ಸಿಬಂದಿ ಹಾಗೂ ಉಳ್ಳಾಲ ಠಾಣೆಯ ಪೊಲೀಸ್‌ ಇನ್‌ಸ್ಪೆಕ್ಟರ್‌ ಗೋಪಿಕೃಷ್ಣ  ಮತ್ತು ಸಿಬಂದಿ ಈ ಪತ್ತೆ ಕಾರ್ಯದಲ್ಲಿ  ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next