Advertisement

Ayodhya: ಭೇಟಿ ಬಗ್ಗೆ ಹತ್ತು ದಿನ ಮೊದಲೇ ತಿಳಿಸಿ: ವಿವಿಐಪಿಗಳಿಗೆ ಯೋಗಿ ಸರಕಾರದ ಕೋರಿಕೆ

01:15 AM Jan 25, 2024 | Team Udayavani |

ಅಯೋಧ್ಯೆ: ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲು ಇಚ್ಛಿಸುವ ವಿವಿಐಪಿಗಳು 7-10ದಿನಗಳ ಮೊದಲೇ ಪ್ರವಾಸ ಕಾರ್ಯಕ್ರಮ ತಿಳಿಸಬೇಕು ಎಂದು ಉ.ಪ್ರ. ಸರ್ಕಾರ ಮನವಿ ಮಾಡಿದೆ. ಈಗಾಗಲೇ ಹಲವಾರು ಮಂದಿ ದೇಶ ವಿದೇಶಗಳ ಗಣ್ಯರು ರಾಮ ಮಂದಿರ ವೀಕ್ಷಣೆಗೆ ತೆರೆಳಲು ತುದಿಗಾಲಲ್ಲಿ ನಿಂತಿದ್ದಾರೆ.

Advertisement

ಮುನ್ಸೂಚನೆ ನೀಡದೆ ಗಣ್ಯರ ಆಗಮನದಿಂದ ಸಾರ್ವಜನಿಕರ ಹಾಗೂ ಗಣ್ಯರ ಭದ್ರತೆಗೂ ತೊಂದರೆ ಆಗಲಿದೆ. ಅದನ್ನು ತಪ್ಪಿಸಲು ಮುಂಚಿತವಾಗಿ ಗಣ್ಯರು ತಮ್ಮ ಪ್ರವಾಸದ ವಿವರ ನೀಡಲು ಉ.ಪ್ರ ಸರ್ಕಾರ ಮನವಿ ಮಾಡಿದೆ. ಜ.31ರಿಂದ ಮಾ.4ರ ವರೆಗೆ ಬಿಜೆಪಿ ಸರ್ಕಾರದ ಆಡಳಿತ ಇರುವ ರಾಜ್ಯಗಳ ಸಿಎಂಗಳು ತಮ್ಮ ಸಂಪುಟ ಸಚಿವರ ಜತೆಗೆ ರಾಮ ಮಂದಿರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ. ಅದರ ಬೆನ್ನಲ್ಲಿಯೇ ಈ ಮನವಿ ಮಾಡಲಾಗಿದೆ. ಇದೇ ವೇಳೆ, ಜ.31ರಿಂದ ಮಾ.4ರ ವರೆಗೆ ಬಿಜೆಪಿ ವತಿಯಿಂದ ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಜನರನ್ನು ಅಯೋಧ್ಯೆಗೆ ಕರೆತರಲು ಬಿಜೆಪಿ ಸಿದ್ಧತೆ ನಡೆಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next