Advertisement

Udupi: ನಗರಸಭೆ ಪೌರಾಯುಕ್ತರಿಗೆ ನೋಟಿಸ್‌

07:07 PM Mar 21, 2024 | Team Udayavani |

ಉಡುಪಿ: ಬಡಗುಬೆಟ್ಟು ಚಿಟ್ಪಾಡಿ ಗ್ರಾಮದ ಸರ್ವೇ ನಂ. 46/77ರಲ್ಲಿ ವಸತಿ ಉದ್ದೇಶಕ್ಕಾಗಿ ಭೂ ಪರಿವರ್ತನೆಗೊಂಡ ನಿವೇಶನದಲ್ಲಿ ವಾಣಿಜ್ಯ ಉದ್ದೇಶದ ಸಮುದಾಯ ಭವನ ನಿರ್ಮಾಣದ ಬಗ್ಗೆ ನಗರಸಭಾ ಪೌರಾಯುಕ್ತ ರಾಯಪ್ಪ ಅವರಿಗೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರು ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ಶಾಸಕ ಯಶ್‌ಪಾಲ್‌ ಸುವರ್ಣ ಅವರು ಕಟ್ಟಡ ನಿರ್ಮಾಣ ಪ್ರಕ್ರಿಯೆ ಕಾನೂನುಬಾಹಿರ ಎಂದು ಯೋಜನಾ ನಿರ್ದೇಶಕರಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ನೊಟೀಸ್‌ ಜಾರಿಯಾಗಿದೆ.

ಈ ಕಟ್ಟಡಕ್ಕೆ 1.74 ಕೋ. ರೂ. ಒದಗಿಸಲು ಜಿಲ್ಲಾಧಿಕಾರಿಯವರು ಅಲ್ಪಸಂಖ್ಯಾಕರ ಕಲ್ಯಾಣ ಇಲಾಖೆಗೆ ಶಿಫಾರಸು ಮಾಡಿರುವುದಕ್ಕೂ ಯಶ್‌ಪಾಲ್‌ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next