Advertisement

ಮದ್ಯದ ಅಂಗಡಿ ಕಳ್ಳತನ ತಡೆಗೆ ಸೆಕ್ಯೂರಿಟಿ ಗಾರ್ಡ್ ನೇಮಕಕ್ಕೆ ಸೂಚನೆ

02:04 AM Apr 09, 2020 | keerthan |

ಕೊಪ್ಪಳ: ಕೋವಿಡ್-19 ಹಿನ್ನಲೆಯಲ್ಲಿ ಇಡೀ ದೇಶವೇ ಲಾಕ್‌ ಡೌನ್ ಆಗಿದೆ. ಈ ವೇಳೆ ಮದ್ಯಪ್ರೀಯರು ಮದ್ಯಕ್ಕಾಗಿ ಪರಿತಪಿಸುವಂತಾಗಿವೆ. ರಾಜ್ಯದ ವಿವಿದೆಡೆಯೂ ಮದ್ಯದ ಅಂಗಡಿಗಳಲ್ಲಿ ಕಳ್ಳತನ ಪ್ರಕರಣಗಳು ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿನ ಮದ್ಯದ ಅಂಗಡಿಗಳ ಕಳ್ಳತನವನ್ನು ತಡೆಯಲು ಎಲ್ಲಾ ಮದ್ಯದ ಅಂಗಡಿಗೆ ಭದ್ರತೆ ಒದಗಿಸಿ ಸೆಕ್ಯೂರಿಟಿ ಗಾರ್ಡ್‌ಗಳನ್ನು ನೇಮಿಸಿಕೊಳ್ಳುವಂತೆ ಜಿಲ್ಲಾ ಅಬಕಾರಿ ಅಧಿಕಾರಿ ಸೂಚನೆ ನೀಡಿದ್ದಾರೆ.

Advertisement

ಜಿಲ್ಲೆಯು ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಮದ್ಯದ ಅಂಗಡಿಗಳಿಗೆ ಬೀಗಮುದ್ರೆ ಬಿದ್ದಿದೆ. ಇದರಿಂದ ಮದ್ಯಪ್ರೀಯರು ಚಡಪಡಿಸುವಂತಾಗುತ್ತಿದೆ. ಹಲವೆಡೆ ಬಾರ್‌ಗಳು ಹಾಗೂ ಮದ್ಯದ ಅಂಗಡಿಗಳಿಗೆ ಖದೀಮರು ರಾತ್ರೋ ರಾತ್ರಿ ನುಗ್ಗಿ ಮದ್ಯದ ಬಾಟಲಿಗಳನ್ನು ಹೊತ್ತೊಯ್ಯುತ್ತಿದ್ದಾರೆ. ಕೊಪ್ಪಳದ ಗವಿಮಠ ರಸ್ತೆಯ ಸಾಯಿ ಟ್ರೇಡರ್ಸ್ ಅಂಗಡಿಯಲ್ಲಿ ಇತ್ತೀಚೆಗೆ ಅಂಗಡಿ ಬಾಗಿಲು ಮುರಿದು 80 ಲೀಟರ್‌ನಷ್ಟು 40 ಸಾವಿರ ಮೌಲ್ಯದ ಮದ್ಯವನ್ನ ಕಳ್ಳತನ ಮಾಡಿದ್ದರು. ನಗರ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.

ಇದನ್ನು ಅರಿತ ಜಿಲ್ಲಾ ಅಬಕಾರಿ ಅಧಿಕಾರಿಯವರು ಎಲ್ಲ ಸನ್ನದುದಾರರು ತಮ್ಮ ಅಂಗಡಿಗಳಿಗೆ ಭದ್ರತೆ ಕಲ್ಪಿಸುವ ಜೊತೆಗೆ ಸೆಕ್ಯೂರಿಟಿ ಗಾರ್ಡ್ ನೇಮಕ ಮಾಡಿಕೊಳ್ಳಬೇಕೆಂದು ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next