Advertisement

ಮಳೆಗಾಲ ಆರಂಭಕ್ಕೂ ಮೊದಲು ನದಿ ಸಮೀಪದ ಕುಟುಂಬಗಳಿಗೆ ನೋಟಿಸ್‌

01:25 AM May 30, 2022 | Team Udayavani |

ಮಡಿಕೇರಿ: ಮಳೆಗಾಲದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದಲ್ಲಿ ಸಮರ್ಥವಾಗಿ ಎದುರಿಸಲು ಸಜ್ಜಾಗುವಂತೆ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳಿಗೆ ಕೊಡಗು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ ಸಿಂಗ್‌ ಮೀನಾ ನಿರ್ದೇಶನ ನೀಡಿದರು.

Advertisement

ಮಡಿಕೇರಿ ತಾಲೂಕಿನ ಭಾಗಮಂಡಲ, ನಾಪೋಕ್ಲು ಮತ್ತು ಬೇಂಗೂರು ಗ್ರಾ.ಪಂ ಗಳಿಗೆ ಭೇಟಿ ನೀಡಿದ ಅವರು, ಪ್ರವಾಹ ಪರಿಸ್ಥಿತಿ ಎದುರಾದಲ್ಲಿ ಜನಸಾಮಾನ್ಯರ ನೆರವಿಗೆ ಬರಲು ಸಜ್ಜಾಗಬೇಕು ಮತ್ತು ಮಳೆಗಾಲ ಆರಂಭಕ್ಕೂ ಮೊದಲು ನದಿ ಸಮೀಪದ ಕುಟುಂಬಗಳಿಗೆ ನಿಯಮಾನುಸಾರ ಜಂಟಿ ನೋಟೀಸ್ ನೀಡಬೇಕು ಎಂದು ತಿಳಿಸಿದರು.

ನಾಪೋಕ್ಲು ಬೇತು ಸಮೀಪದ ಚೆರಿಯಪರಂಬು ನದಿ ಪಾತ್ರದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next