Advertisement

ನೋಟು ಅಮಾನ್ಯದ ಬಗ್ಗೆ ಎಚ್ಚರಿಕೆ ನೀಡಿದ್ದ ಮಂಡಳಿ

12:30 AM Mar 12, 2019 | Team Udayavani |

ಹೊಸದಿಲ್ಲಿ: ನೋಟು ಅಮಾನ್ಯದಿಂದ ದೇಶದ ಆರ್ಥಿಕತೆ ಮೇಲೆ ಅಲ್ಪಾವಧಿಯಲ್ಲಿ ಋಣಾತ್ಮಕ ಪರಿಣಾಮ ಉಂಟಾಗುತ್ತದೆ ಎಂದು ಆರ್‌ಬಿಐ ಮಂಡಳಿ ಎಚ್ಚರಿಕೆ ನೀಡಿತ್ತು. ಅಷ್ಟೇ ಅಲ್ಲ, ಕಪ್ಪು ಹಣ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿಯೂ ಇದು ಅಷ್ಟೇನೂ ಪರಿಣಾಮ ಬೀರದು ಎಂದೂ ಅಭಿಪ್ರಾಯ ವ್ಯಕ್ತಪಡಿಸಿತ್ತು ಎಂಬುದು ತಿಳಿದುಬಂದಿದೆ. ಆರ್‌ಟಿಐ ಅಡಿಯಲ್ಲಿ ವೆಂಕಟೇಶ್‌ ನಾಯಕ್‌ ಎಂಬವರು ಸಲ್ಲಿಸಿದ ಅರ್ಜಿಗೆ ಉತ್ತರಿಸಿದ ಆರ್‌ಬಿಐ, ನೋಟು ಅಮಾನ್ಯ ನಿರ್ಧಾರ ಪ್ರಕಟಿಸುವುದಕ್ಕೂ ಎರಡೂವರೆ ಗಂಟೆ ಮೊದಲು ಸಭೆ ನಡೆಸಿದಾಗ ಈ ಮಾಹಿತಿ ನೀಡಲಾಗಿತ್ತು ಎಂದಿದೆ. ಇದು ಮಹತ್ತರವಾದ ನಿರ್ಧಾರ. ಆದರೆ ಜಿಡಿಪಿ ಮೇಲೆ ಅಲ್ಪಾವಧಿ ಋಣಾತ್ಮಕ ಪರಿಣಾಮ ಬೀರುತ್ತದೆ. ಬಹುತೇಕ ಕಪ್ಪುಹಣ ನಗದು ರೂಪದಲ್ಲಿಲ್ಲ. ಇದು ರಿಯಲ್‌ ಎಸ್ಟೇಟ್‌ ಮತ್ತು ಚಿನ್ನದಂತಹ ವಲಯದಲ್ಲಿದೆ. ಇದರಿಂದ ಈ ಸ್ವತ್ತುಗಳ ಮೇಲೆ ಮಹತ್ವದ ಪರಿಣಾಮ ಉಂಟಾಗುವುದಿಲ್ಲ ಎಂದು ಮಂಡಳಿ ಅಭಿಪ್ರಾಯ ವ್ಯಕ್ತಪಡಿಸಿತ್ತು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next