Advertisement

ಪೋಲಿಯೋ ಲಸಿಕೆ ಅಭಿಯಾನಕ್ಕೆ ಅಗತ್ಯ ಸಿದತೆಗೆ ಸೂಚನೆ

06:28 AM Mar 06, 2019 | Team Udayavani |

ಬೀದರ: ಪೋಲಿಯೋ ರೋಗ ನಿರ್ಮೂಲನೆಗೆ ಸರ್ಕಾರ ಸಾಕಷ್ಟು ಪ್ರಯತ್ನಿಸುತ್ತಿದೆ. ಅಭಿಯಾನ ದಿನದಂದು ಆರೋಗ್ಯ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ, ಸಿಡಿಪಿಒ, ಸಾರಿಗೆ ಸೇರಿದಂತೆ ಎಲ್ಲಾ ಇಲಾಖೆಗಳು ಸಹಕರಿಸಬೇಕು ಎಂದು ಭಾಲ್ಕಿ ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ಹೇಳಿದರು.

Advertisement

ಭಾಲ್ಕಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಪಲ್ಸ್‌ ಪೋಲಿಯೋ ತಾಲೂಕು ಕಾರ್ಯಪಡೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಲ್ಸ್‌ ಪೊಲೀಯೋ ಲಸಿಕೆ ಅಭಿಯಾನಕ್ಕಿಂತ ಮುಂಚಿತವಾಗಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎಲ್ಲಿಯೂ ಲಸಿಕೆಗೆ ಕೊರತೆಯಾಗಬಾರದು. ಯಾವೊಂದು ಮಗುವೂ ಲಸಿಕೆಯಿಂದ ವಂಚಿತರಾಗಬಾರದು ಎಂದು ನಿರ್ದೇಶನ ನೀಡಿದರು.

ತಾಲೂಕು ಆರೋಗ್ಯ ಅಧಿಕಾರಿ ಡಾ|ಶರಣಯ್ನಾ ಸ್ವಾಮಿ ಮಾತನಾಡಿ, ಪ್ರಾದೇಶಿಕ ಸಾರಿಗೆ ಇಲಾಖೆಯಿಂದ ಪ್ರತಿ ಆರೋಗ್ಯ ಕೇಂದ್ರಕ್ಕೆ ಒಂದೊಂದು ವಾಹನದ ವ್ಯವಸ್ಥೆ ಕಲ್ಪಿಸಬೇಕು. ಅಂದು ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ದಿನದ 24 ಗಂಟೆಯೂ ವಿದ್ಯುತ್‌ ಸಂಪರ್ಕ ಇರುವಂತೆ
ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿದರು.

ತಾಲೂಕು ಶಿಕ್ಷಣಾಧಿಕಾರಿ ಶಿವಗುಂಡಪ್ಪಾ ಎಚ್‌.ಎಸ್‌., ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ| ಟಿ.ರುಬಿನಾ, ವೈದ್ಯಾಧಿಕಾರಿ ಡಾ| ದೇವಕಿ ಖಂಡ್ರೆ, ಡಾ| ಜಗದೀಶ, ಡಾ| ನೇಹಾ ಸಮರೀನ್‌, ಡಾ| ಲೋಕೇಶ, ಡಾ| ಸುಕಾನಂದ, ಡಾ| ಸುಶೀಲಕುಮಾರ, ಡಾ| ಶೇಶನಾಗ,
ಡಾ|ಶರಣಬಸಪ್ಪಾ, ಡಾ|ಸ್ವಾತಿ ಪಾಟೀಲ, ಡಾ|ಅಶ್ವಿ‌ನಿ, ಡಾ| ಪ್ರಿಯಂಕಾ, ಆರೋಗ್ಯ ಇಲಾಖೆಯ ಶಕುಂತಲಾ, ಪ್ರತಿಭಾ, ಓಂಕಾರ, ವಿಶಾಲಕುಮಾರ, ತಾಲೂಕಿನ ಎಲ್ಲಾ ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next