Advertisement

ಸ್ಟ್ರೀಟ್‌ ವೆಂಡಿಂಗ್‌ ವಲಯ ರಚನೆಗೆ ಸೂಚನೆ

03:05 PM Apr 07, 2021 | Team Udayavani |

ಧಾರವಾಡ: ಬೀದಿ ಬದಿ ವ್ಯಾಪಾರಿಗಳು ಎಲ್ಲೆಂದರಲ್ಲಿ ಕುಳಿತು ವ್ಯಾಪಾರಮಾಡುತ್ತಿರುವುದರಿಂದ ಸುಗಮ ಸಂಚಾರ ಹಾಗೂ ಸ್ವಚ್ಛತೆ, ನೈರ್ಮಲ್ಯ ಕಾಪಾಡಲು ತೊಂದರೆ ಆಗಿದೆ. ಹೀಗಾಗಿಬೀದಿ ಬದಿ ವ್ಯಾಪಾರಿ ಮಾರ್ಗಸೂಚಿಗಳ ಪ್ರಕಾರ ಸ್ಟ್ರೀಟ್‌ ವೆಂಡಿಂಗ್‌ ಜೋನ್‌ಗಳನ್ನು ರಚಿಸಿ, ಬೀದಿ ಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ಸ್ಥಳಾವಕಾಶ, ಶೌಚಾಲಯ, ಕುಡಿಯುವ ನೀರು, ತ್ಯಾಜ್ಯ ಸಂಗ್ರಹಕ್ಕೆ ಸ್ಥಳ ಗುರುತಿಸಿ ನಿಗದಿಪಡಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

Advertisement

ಡಿಸಿ ಕಚೇರಿಯಲ್ಲಿ ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯುಕ್ತರು ಮತ್ತು ಅಧಿಕಾರಿಗಳ ಸಭೆ ಕೈಗೊಂಡು ಅವರು ಮಾತನಾಡಿದರು. ಹುಬ್ಬಳ್ಳಿಯ ಸ್ಟೇಶನ್‌ ರಸ್ತೆ, ಕೊಪ್ಪಿಕರರಸ್ತೆ, ದಾಜಿಬಾನ್‌ ಪೇಟೆ, ಬ್ರಾಡ್‌ವೇಹಾಗೂ ಧಾರವಾಡದ ಸುಭಾಸ ರಸ್ತೆ,ಟಿಕಾರೆ ರಸ್ತೆ, ಲೈನ್‌ ಬಜಾರ್‌ದಂತಹಪ್ರಮುಖ ರಸ್ತೆಗಳಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ನೀಡದೆ ಸ್ವಚ್ಛತೆ, ಸುಗಮಸಂಚಾರದೊಂದಿಗೆ ಸಿಟಿ ಇಮೇಜ್‌ ರೋಡ್‌ಗಳಾಗಿ ರೂಪಿಸಬೇಕು. ಇದರಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರುಹಾಗೂ ಇತರರು ನಗರದ ಬಗ್ಗೆ ಉತ್ತಮಅಭಿಪ್ರಾಯ ವ್ಯಕ್ತಪಡಿಸಲು ಹಾಗೂನಗರವನ್ನು ಮಾದರಿಯಾಗಿ ನಿರ್ಮಿಸಲು ಸಹಾಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಪಾಲಿಕೆ ಹಾಗೂಸರ್ಕಾರಿ ರಸ್ತೆ, ಭೂಮಿಗಳ ಒತ್ತುವರಿಹಾಗೂ ಅತಿಕ್ರಮಣ ತೆರವು ಕಾರ್ಯ  ಮುಂದುವರಿದಿದೆ. ಅತಿಕ್ರಮಣದಾರರಿಗೆ ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಲು ಈಗಾಗಲೇ ಒಂದು ಅವಕಾಶ ನೀಡಲಾಗಿದೆ. ಸಮಯಾನುಸಾರ ಪಾಲಿಕೆ ಆಯುಕ್ತರು ತೆರವು ಕಾರ್ಯಾಚರಣೆ ಮುಂದುವರಿಸಲಿದ್ದಾರೆ ಎಂದು ಹೇಳಿದರು. ಮಹಾನಗರ ಪಾಲಿಕೆ ಆಯುಕ್ತರ ಸಮವರ್ತಿತ ಪ್ರಭಾರದಲ್ಲಿರುವ ಐಎಎಸ್‌ ಅಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಅವಳಿನಗರದ12 ವಲಯಗಳ ವ್ಯಾಪ್ತಿಯಲ್ಲಿ ಒಟ್ಟು 59 ರಸ್ತೆ ಹಾಗೂ 8 ಖುಲ್ಲಾಜಾಗವನ್ನು ಬೀದಿ ಬದಿ ವ್ಯಾಪಾರಿಗಳವ್ಯಾಪಾರಕ್ಕಾಗಿ ಗುರುತಿಸಲಾಗಿದೆ. ಏ. 8ರಂದು ಪಾಲಿಕೆ ಕಚೇರಿಯಲ್ಲಿಸ್ಟ್ರೀಟ್‌ ವೆಂಡರ್ ಕಮಿಟಿ ಸಭೆ ಜರುಗಿಸಿ ಅಂತಿಮಗೊಳಿಸಲಾಗುವುದು ಎಂದರು.

ಪಾಲಿಕೆ ಮುಖ್ಯ ಲೆಕ್ಕಾಧಿಕಾರಿ ಹಾಗೂ ಕಂದಾಯ ಉಪ ಆಯುಕ್ತ ಶಂಕರಾನಂದಬನಶಂಕರಿ ಮಾತನಾಡಿ, ಬೀದಿ ಬದಿವ್ಯಾಪಾರಿಗಳಿಗೆ ವ್ಯಾಪಾರಕ್ಕಾಗಿ ಪುನರ್‌ವಸತಿ ಕಲ್ಪಿಸಿ, ಅಗತ್ಯ ಮೂಲಸೌಲಭ್ಯ ಕಲ್ಪಿಸಲು ಪಾಲಿಕೆಯಿಂದ ಪ್ರಸಕ್ತ ಸಾಲಿನಆಯವ್ಯಯದಲ್ಲಿ ಸುಮಾರು 6 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಎಸಿ ಡಾ|ಗೋಪಾಲಕೃಷ್ಣಬಿ., ಪಾಲಿಕೆ ಜಂಟಿ ಆಯುಕ್ತ ಅಜೀಜ್‌ದೇಸಾಯಿ, ಅಧೀಕ್ಷಕ ಅಭಿಯಂತ ಇ. ತಿಮ್ಮಪ್ಪ ಇನ್ನಿತರರಿದ್ದರು.

Advertisement

ಮಹಾನಗರದಲ್ಲೂ ಜನಸಂಪರ್ಕ ಸಭೆ :

ಗ್ರಾಮೀಣ ಭಾಗದಲ್ಲಿ ಆಯೋಜಿಸುತ್ತಿರುವ ಗ್ರಾಮ ವಾಸ್ತವ್ಯದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಪ್ರಿಲ್‌ ತಿಂಗಳಿಂದ ಪಾಲಿಕೆ ಆಯುಕ್ತರೊಂದಿಗೆ ಪ್ರತಿ

ತಿಂಗಳಿಗೊಂದು ದಿನ ವಲಯವಾರು ಜನಸಂಪರ್ಕ ಸಭೆ ಜರುಗಿಸಿ ನಾಗರಿಕರಿಂದ ಅಹವಾಲು ಸ್ವೀಕರಿಸಲಾಗುವುದು ಎಂದು ಡಿಸಿ ನಿತೇಶ ಪಾಟೀಲ ತಿಳಿಸಿದರು.

ಮೊದಲ ಸಭೆ ಏಪ್ರಿಲ್‌ ತಿಂಗಳಿನಲ್ಲಿ ಧಾರವಾಡದ ವಲಯ-1ರಲ್ಲಿ ಆಯೋಜಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಒಂದು ವಲಯದಲ್ಲಿ ನನ್ನೊಂದಿಗೆ ಪಾಲಿಕೆ ಆಯುಕ್ತರು ಭಾಗವಹಿಸುತ್ತಾರೆ. ಅದೇ ದಿನ ಉಳಿದ ವಲಯಗಳಲ್ಲಿಆಯಾ ವಲಯ ಸಹಾಯಕ ಆಯುಕ್ತರು ಜನಸಂಪರ್ಕ ಸಭೆ ಆಯೋಜಿಸಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಕುರಿತ ವರದಿ ಸಲ್ಲಿಸಬೇಕು ಎಂದರು.

ಕಟ್ಟಡ ಸಿಸಿ ದುರ್ಬಳಕೆ; ಜಿಲ್ಲಾಧಿಕಾರಿ ಎಚ್ಚರಿಕೆ :

ಅವಳಿನಗರದ ಅನೇಕ ಕಟ್ಟಡಗಳ ಮಾಲೀಕರು ಕೆಳ ಮಹಡಿಯಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವ ಬದಲಾಗಿ ಅದನ್ನು ಅಂಗಡಿ, ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿದ್ದಾರೆ. ಕಟ್ಟಡದ ಸಿಸಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಾಲಿಕೆ ಅಧಿಕಾರಿಗಳು ಮುಂದಿನ 15 ದಿನಗಳಲ್ಲಿ ಪ್ರತಿ ಕಟ್ಟಡದ ಸಿಸಿ ಪರಿಶೀಲಿಸಬೇಕು. ಕೆಳಮಹಡಿಯಲ್ಲಿ ಪಾರ್ಕಿಂಗ್‌ ಸ್ಥಳ ತೋರಿಸಿ ಅನ್ಯ ಕಾರ್ಯಕ್ಕೆ ಬಳಸುತ್ತಿರುವ ಕಟ್ಟಡ ಮಾಲೀಕರಿಗೆ ದುಪ್ಪಟ್ಟು ದಂಡ ವಿಧಿಸಿ ಸಿಸಿ ಕ್ಯಾನ್ಸಲ್‌ ಮಾಡಲು ನೋಟಿಸ್‌ಜಾರಿಗೊಳಿಸಬೇಕು ಎಂದು ಡಿಸಿ ನಿತೇಶ ಪಾಟೀಲ ಹೇಳಿದರು. ಪಾರ್ಕಿಂಗ್‌ಸ್ಥಳದಲ್ಲಿ ವಾಣಿಜ್ಯ ಚಟುವಟಿಕೆ ನಡೆಸುವ ಅಂಗಡಿ, ಸ್ಟೋರ್‌ಗಳ ಟ್ರೆಡ್‌ ಲೈಸನ್ಸ್‌ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು. ಅನುಸರಣಾ ವರದಿಯನ್ನು 15 ದಿನಗಳಲ್ಲಿಸಲ್ಲಿಸಬೇಕು. ಪಾರ್ಕಿಂಗ್‌ ಸ್ಥಳ ಕ್ಲಿಯರ್‌ ಆಗದಿದ್ದಲ್ಲಿ ಬೆಸ್‌ಮೆಂಟ್‌ ಜಾಗದಲ್ಲಿಅಂಗಡಿ, ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡಿದ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಅವಳಿನಗರದಲ್ಲಿ ಸಂಚಾರಿ ದಟ್ಟಣೆ ನಿಭಾಯಿಸಲು ಹಾಗೂ ಸುಗಮ ಸಂಚಾರಕ್ಕಾಗಿ ಪಾಲಿಕೆ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ 140 ರಸ್ತೆಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ವರದಿ ನೀಡಿದ್ದಾರೆ. ಶೀಘ್ರದಲ್ಲಿ ನಗರ ಪೊಲೀಸ್‌ ಆಯುಕ್ತರಿಂದ 140 ರಸ್ತೆಗಳ ಪಕ್ಕದಲ್ಲಿ ಪಾರ್ಕಿಂಗ್‌ ಸೌಲಭ್ಯಕ್ಕೆ ಅಧಿಸೂಚನೆ ಪ್ರಕಟಿಸಲಾಗುವುದು.ನಿತೇಶ ಪಾಟೀಲ, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next