Advertisement

ತನಿಖೆ ಪೂರ್ಣಗೊಳ್ಳುವವರೆಗೆ ಮೈಸೂರು ಬಿಟ್ಟು ತೆರಳದಂತೆ ಮನೋರಂಜನ್‌ ಕುಟುಂಬಕ್ಕೆ ಸೂಚನೆ

10:15 PM Dec 16, 2023 | Pranav MS |

ಮೈಸೂರು: ಸಂಸತ್‌ ಭವನದ ಘಟನೆ ಸಂಬಂಧ ತನಿಖೆ ಪೂರ್ಣಗೊಳ್ಳುವವರೆಗೆ ಮೈಸೂರು ಬಿಟ್ಟು ಬೇರೆಡೆ ತೆರಳದಂತೆ ಮನೋರಂಜನ್‌ ಕುಟುಂಬಕ್ಕೆ ಪೊಲೀಸ್‌ ಇಲಾಖೆ ಗುಪ್ತಚರ ವಿಭಾಗ ಸೂಚಿಸಿದೆ.

Advertisement

ಲೋಕಸಭಾ ಕಲಾಪದ ವೇಳೆ ನುಗ್ಗಿ ಕೋಲಾಹಲ ಸೃಷ್ಟಿಸಿದ ವಿಚಾರ, ಭದ್ರತಾ ವೈಫ‌ಲ್ಯ ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನ ವಿಜಯನಗರದ ಆರೋಪಿ ಮನೋರಂಜನ್‌ ಕುಟುಂಬಸ್ಥರಿಗೆ ಸಂಕಷ್ಟ ಎದುರಾಗಿದೆ.

ಮೈಸೂರು ವಿಜಯನಗರದ ಮನೋರಂಜನ್‌ ನಿವಾಸಕ್ಕೆ ಭೇಟಿ ನೀಡಿದ್ದ ಗುಪ್ತಚರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next