Advertisement

ಹಕ್ಕಿಜ್ವರ ಪೀಡಿತ ಕೋಳಿಗಳ ನಾಶಕ್ಕೆ ಸೂಚನೆ: ಚವ್ಹಾಣ

11:14 PM Mar 17, 2020 | Lakshmi GovindaRaj |

ಬೆಂಗಳೂರು/ ದಾವಣಗೆರೆ: ಹಕ್ಕಿಜ್ವರ ದೃಢಪಟ್ಟಿರುವ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬನ್ನಿಕೋಡು ಗ್ರಾಮದ 157 ಕುಟುಂಬ ಗಳಲ್ಲಿನ 1,167 ನಾಟಿ ಕೋಳಿಗಳು, ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಕುಂಬಾರ ಕೊಪ್ಪಲು ಗ್ರಾಮದಲ್ಲಿರುವ ಕೋಳಿ ಫಾರ್ಮ್ ನಲ್ಲಿರುವ ಸುಮಾರು 455 ಮಾಂಸದ ಕೋಳಿ ಮತ್ತು 4,500 ಹಿತ್ತಲ ಕೋಳಿಗಳನ್ನು ವೈಜ್ಞಾನಿಕ ರೀತಿಯಲ್ಲಿ ಇಲಾಖೆಯ ಅಧಿಕಾರಿಗಳು ನಾಶ ಮಾಡಲಿ ದ್ದಾರೆಂದು ಪಶುಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ತಿಳಿಸಿದ್ದಾರೆ.

Advertisement

ಬನ್ನಿಕೋಡ ಹಾಗೂ ಕುಂಬಾರಕೊಪ್ಪಲು ಗ್ರಾಮಗಳ ಒಂದು ಕಿ.ಮೀ. ವ್ಯಾಪ್ತಿಯಲ್ಲಿನ ಪ್ರದೇಶವನ್ನು ರೋಗಪೀಡಿತ ವಲಯ ಹಾಗೂ 1ರಿಂದ 10 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಜಾಗೃತ ವಲಯ ಎಂದು ಘೋಷಿಸಿ ಸರ್ಕಾರದಿಂದ ಅ ಧಿಸೂಚನೆ ಹೊರಡಿಸಲಾಗಿದೆ. ನಾಶಗೊಳಿಸಿದ ಕೋಳಿಗಳಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ವಯ ಪರಿಹಾರ ನೀಡಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next