Advertisement

ದೊಡ್ಡ ಲೀಡರ್‌ಗಳ ಬಗ್ಗೆ ಮಾತಾಡಲ್ಲ: ಹೆಬ್ಟಾಳಕರ

06:00 AM Sep 05, 2018 | Team Udayavani |

ಬೆಳಗಾವಿ: “ಜಾರಕಿಹೊಳಿ ಸಹೋದರರು ದೊಡ್ಡವರು. ಅವರು ಎಲ್ಲವನ್ನೂ ನಿಭಾಯಿಸಲು ಸಮರ್ಥರಿದ್ದಾರೆ. ದೊಡ್ಡ ಲೀಡರ್‌ಗಳ ಬಗ್ಗೆ ನಾನೇನೂ ಹೇಳುವುದಿಲ್ಲ’ ಎನ್ನುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ವಿವಾದದಿಂದ ದೂರ ಉಳಿಯಲು ಯತ್ನಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. “ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ನನ್ನ ಬಗ್ಗೆ ಚರ್ಚೆಯೇ ಆಗಿಲ್ಲ. ಆದರೆ, ಮಾಧ್ಯಮಗಳಲ್ಲಿ ಹೆಬ್ಟಾಳಕರ ಹಾಗೂ ಜಾರಕಿಹೊಳಿ ಸಹೋದರರ ನಡುವಿನ ಗೊಂದಲದ ಚರ್ಚೆ ಎಂಬ ಸುಳ್ಳು ಸುದ್ದಿ ಪ್ರಸಾರವಾಯಿತು.

Advertisement

ಸಭೆಯಲ್ಲಿ ಜಿಲ್ಲೆಯ ಲೋಕಸಭೆ ಚುನಾವಣೆ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಆದರೆ, ನನ್ನ ಹೆಸರಿಗೆ ತಳುಕು ಹಾಕಿ ಸುದ್ದಿ ಮಾಡಲಾಯಿತು’ ಎಂದು ಆರೋಪಿಸಿದರು. ಮುಂಬರುವ ಲೋಕಸಭೆ ಚುನಾವಣೆಗಾಗಿ ಜಿಲ್ಲೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್‌ ನಿರ್ಧಾರ ತೆಗೆದುಕೊಳ್ಳಲಿದೆ.
ಸ್ಥಳೀಯ ಮಟ್ಟದಲ್ಲಿ ನಡೆದ ನಮ್ಮ ಜಗಳವನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಇದನ್ನು ಲೋಕಸಭೆ ಚುನಾವಣೆ ಹಾಗೂ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ ಎಂದರು. “ಲೋಕಸಭೆ ಚುನಾವಣೆಯಲ್ಲಿ ಜಾರಕಿಹೊಳಿಯವರು ಹೇಳಿದ ಅಭ್ಯರ್ಥಿಗೆ ನಾನು ಬೆಂಬಲಿಸುತ್ತೇನೆ. ನನ್ನ ಕ್ಷೇತ್ರದಲ್ಲಿ 53 ಸಾವಿರ ಮತಗಳ ಲೀಡ್‌ ಕೊಡಿಸುತ್ತೇನೆ. ಆದರೆ, ನನ್ನ ಕ್ಷೇತ್ರದ ವಿಚಾರ ಬಂದಾಗ ಜನರಿಗೆ ನ್ಯಾಯ ಒದಗಿಸುವುದನ್ನು ನಾನು
ಮರೆಯುವುದಿಲ್ಲ. ಪಕ್ಷದ ಒಳಿತಿಗೆ ತಗ್ಗಿ-ಬಗ್ಗಿ ನಡೆಯಲು ನಾನು ಸಿದ್ಧ ‘ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next