Advertisement
ಸಭೆಯಲ್ಲಿ ಜಿಲ್ಲೆಯ ಲೋಕಸಭೆ ಚುನಾವಣೆ ಬಗ್ಗೆ ಮಾತ್ರ ಚರ್ಚೆ ನಡೆದಿದೆ. ಆದರೆ, ನನ್ನ ಹೆಸರಿಗೆ ತಳುಕು ಹಾಕಿ ಸುದ್ದಿ ಮಾಡಲಾಯಿತು’ ಎಂದು ಆರೋಪಿಸಿದರು. ಮುಂಬರುವ ಲೋಕಸಭೆ ಚುನಾವಣೆಗಾಗಿ ಜಿಲ್ಲೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ.ಸ್ಥಳೀಯ ಮಟ್ಟದಲ್ಲಿ ನಡೆದ ನಮ್ಮ ಜಗಳವನ್ನು ಇಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ. ಇದನ್ನು ಲೋಕಸಭೆ ಚುನಾವಣೆ ಹಾಗೂ ಪಕ್ಷದ ಸಂಘಟನೆ ಮೇಲೆ ಪರಿಣಾಮ ಬೀರಲು ಬಿಡುವುದಿಲ್ಲ ಎಂದರು. “ಲೋಕಸಭೆ ಚುನಾವಣೆಯಲ್ಲಿ ಜಾರಕಿಹೊಳಿಯವರು ಹೇಳಿದ ಅಭ್ಯರ್ಥಿಗೆ ನಾನು ಬೆಂಬಲಿಸುತ್ತೇನೆ. ನನ್ನ ಕ್ಷೇತ್ರದಲ್ಲಿ 53 ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ. ಆದರೆ, ನನ್ನ ಕ್ಷೇತ್ರದ ವಿಚಾರ ಬಂದಾಗ ಜನರಿಗೆ ನ್ಯಾಯ ಒದಗಿಸುವುದನ್ನು ನಾನು
ಮರೆಯುವುದಿಲ್ಲ. ಪಕ್ಷದ ಒಳಿತಿಗೆ ತಗ್ಗಿ-ಬಗ್ಗಿ ನಡೆಯಲು ನಾನು ಸಿದ್ಧ ‘ ಎಂದು ಹೇಳಿದರು.