Advertisement
ಪ್ರವೃತ್ತಿಯಲ್ಲಿ ಸಮಾಜ ಸೇವೆವೃತ್ತಿಯಲ್ಲಿ ವೈದ್ಯರಾಗಿದ್ದು ಪ್ರವೃತ್ತಿಯಲ್ಲಿ ತೊಡಗಿಸಿಕೊಂಡಿದ್ದು ಸಮಾಜ ಸೇವೆಯಲ್ಲಿ. 1997ರಲ್ಲಿ ಪ್ರಾರಂಭಗೊಂಡ ಸ್ಥಳೀಯ ಲಯನ್ಸ್ ಕ್ಲಬ್ನ ಸ್ಥಾಪಕ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ, 3 ವರ್ಷಗಳ ಕಾಲ ಕ್ಯಾಬಿನೆಟ್ ಸದಸ್ಯರಾಗಿ ಸೇವೆ ಸಲ್ಲಿಸಿದವರು ಡಾ| ಪ್ರಭಾಕರ ಶೆಟ್ಟರು. ಎಂಆರ್ಪಿಎಲ್ ಗದ್ದಲದ ಸಂದರ್ಭ ಕೋಮು ಸಂಘರ್ಷಕ್ಕೆ ತುತ್ತಾಗಿದ್ದ ಕಾಪುವಿನಲ್ಲಿ ಶಾಂತಿ ಪರಿಪಾಲನಾ ಸಮಿತಿಯ ಅಧ್ಯಕ್ಷರಾಗಿ ಅವರು ಕರ್ತವ್ಯ ನಿರ್ವಹಿಸಿದ ರೀತಿ ಇಂದಿಗೂ ಸ್ಮರಣೀಯ. ಯೂತ್ ರೆಡ್ ಕ್ರಾಸ್, ಉಡುಪಿ – ಕರಾವಳಿ ಐ.ಎಂ.ಎ., ಉಡುಪಿ ಜಿಲ್ಲಾ ಖಾಸಗಿ ಆಸ್ಪತ್ರೆಗಳ ಸ್ಥಾಪಕ ಅಧ್ಯಕ್ಷರಾಗಿಯೂ ಕೆಲಸ ಮಾಡಿದವರು. ಅದಮಾರು ಪಿಯು ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸ್ಥಾಪಕ ಅಧ್ಯಕ್ಷರಾಗಿದ್ದಲ್ಲದೆ ನಿರಂತರ 18 ವರ್ಷ ವಿದ್ಯಾ ಸಂಸ್ಥೆಯ ಏಳಿಗೆಗಾಗಿ ನಿರಂತರ ಶ್ರಮಿಸಿದ್ದಾರೆ.
Related Articles
ಹೆರಿಗೆ ನೋವು ಅನುಭವಿಸುತ್ತಿರುವ ಗರ್ಭಿಣಿಯರು ಅಥವಾ ರೋಗಿಗಳಿಗೆ ಚಿಕಿತ್ಸೆ ಕೊಡಲು ವೈದ್ಯರು ಕಾಲ್ನಡಿಗೆಯಲ್ಲೇ ಮನೆಗೆ ತೆರಳ ಬೇಕಿತ್ತು. ರಾತ್ರಿಯಾದರೆ ಒಂದು ಟಾರ್ಚ್, ಮಳೆಯಾದರೆ ಒಂದು ಕೊಡೆಯಷ್ಟೇ ಜತೆಗೆ. ಅದರಲ್ಲೂ ಮನೆಗಳಲ್ಲೇ ಹೆರಿಗೆ ಮಾಡಿಸು ವುದೆಂದರೆ ಬಹಳ ಕಷ್ಟ. ಒಳಗೆ ಕತ್ತಲೆ ಕೋಣೆಯಲ್ಲಿ ಗರ್ಭಿಣಿ ಪಕ್ಕದಲ್ಲಿ ಒಂದು ಮಣೆಯ ಮೇಲೆ ಕುಳಿತು ಚಿಮಿಣಿ ದೀಪದ ಬೆಳಕಿನಲ್ಲಿ ಹೆರಿಗೆಯನ್ನು ಮಾಡಿಸಬೇಕಿತ್ತು. ಸಹಾಯಕ್ಕಾಗಿ ಯಾವ ನರ್ಸುಗಳೂ ಇರ ಲಿಲ್ಲ. ಪ್ರಸವಕ್ಕೆ ಸಮಯ ತೆಗೆದುಕೊಂಡರೆ ಕಾಯುತ್ತಾ ಕುಳಿತುಕೊಳ್ಳಬೇಕಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಡಾ| ಪ್ರಭಾಕರ ಶೆಟ್ಟಿ.
Advertisement
ಒಂದು ಘಟನೆ-ಮಹತ್ವದ ನಿರ್ಧಾರ 1967ರಲ್ಲಿ ಕೆ.ಎಂ.ಸಿ.ಯವರು ಕಾಪುವಿನಲ್ಲಿ ಸ್ಥಾಪಿಸಿದ ಹೆರಿಗೆ ಆಸ್ಪತ್ರೆಯಲ್ಲಿ ಗೌರವ ವೈದ್ಯಾಧಿಕಾರಿಯಾಗಿದ್ದಾಗ ಸಾವು – ಬದುಕಿನ ಮಧ್ಯೆ ಹೋರಾಡುತ್ತಿದ್ದ ತಾಯಿ-ಮಗಳ ಜೀವವನ್ನು ಉಳಿಸಿದ್ದು ತನ್ನ ಸೇವಾ ಜೀವನದ ಅವಿಸ್ಮರಣೀಯ ಘಟನೆ. ಅದೇ ಸಂಗತಿ 1985ರಲ್ಲಿ ಕೊಪ್ಪಲಂಗಡಿಯಲ್ಲಿ ಪ್ರಶಾಂತ್ ಆಸ್ಪತ್ರೆಯನ್ನು ಸ್ಥಾಪಿಸಿ ಜನರ ಸೇವೆ ಮಾಡಲು ಪ್ರೇರಣೆ ನೀಡಿತು.
ಡಾ| ಪ್ರಭಾಕರ ಶೆಟ್ಟಿ