Advertisement

BJP ತೊರೆದಿಲ್ಲ, ಆರಗ ಜ್ಞಾನೇಂದ್ರರೇ ನಮ್ಮ ನಾಯಕರು: ವಸಂತಿ ಶ್ರೀನಿವಾಸ್

09:05 PM Aug 09, 2023 | Team Udayavani |

ತೀರ್ಥಹಳ್ಳಿ: ಹಾದಿಗಲ್ ಗ್ರಾಮ ಪಂಚಾಯತ್ ನೂತನ ಅಧ್ಯಕ್ಷರಾಗಿ ಮಂಗಳವಾರ ಆಯ್ಕೆಯಾದ ವಸಂತಿ ಶ್ರೀನಿವಾಸ್, ನಾನು ಬಿಜೆಪಿ ತೊರೆದಿಲ್ಲ, ಆರಗ ಜ್ಞಾನೇಂದ್ರ ನಮ್ಮ ನಾಯಕರು. ಎಂದು ಹೇಳಿದ್ದಾರೆ.

Advertisement

ಶಾಸಕ ಆರಗ ಜ್ಞಾನೇಂದ್ರ ಅವರ ಮನೆಗೆ ಭೇಟಿ ನೀಡಿ ಆರಗ ಜ್ಞಾನೇಂದ್ರ ಅವರ ಆಶೀರ್ವಾದ ಪಡೆದ ಅವರು ಈ ಹೇಳಿಕೆ ನೀಡಿದ್ದು ಕಾಂಗ್ರೆಸ್ ಬೆಂಬಲ ಪಡೆದು ಹಾದಿಗಲ್ಲು ಗ್ರಾಮ ಪಂಚಾಯಿತಿ ನೂತನವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದೇನೆ.
ಕೆಲವು ಪತ್ರಿಕೆಗಳಲ್ಲಿ ನಾನು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದೇನೆ ಎಂದು ವರದಿಯಾಗಿದೆ.

ಯಾವುದೇ ಕಾರಣಕ್ಕೂ ನಾನು ಬಿಜೆಪಿ ಪಕ್ಷವನ್ನ ಬಿಟ್ಟಿಲ್ಲ, ನಮ್ಮ ನಾಯಕರು ಅರಗ ಜ್ಞಾನೇಂದ್ರ ಅವರೇ ಗ್ರಾಮ ಪಂಚಾಯಿತಿ ಸದಸ್ಯರಾಗಲು, ಇದೀಗ ಅಧ್ಯಕ್ಷರಾಗಲು ನನಗೆ ಅವಕಾಶ ಕಲ್ಪಿಸಿ ಕೊಟ್ಟಿರುವುದು ಬಿಜೆಪಿ ಪಕ್ಷ ನಾನು ಇಂದಿಗೂ ಬಿಜೆಪಿಯಲ್ಲೇ ಇದ್ದೇನೆ. ನಾನು ಅಧ್ಯಕ್ಷರಾಗಲು ನಮ್ಮ ಪಕ್ಷದ ಕೆಲವರು ಅಡ್ಡಿ ಪಡಿಸಿದ್ದರು ಆದ್ದರಿಂದ ಕಾಂಗ್ರೆಸ್ ಬೆಂಬಲ ಪಡೆದು ಅಧ್ಯಕ್ಷಳಾಗಿದ್ದೇನೆ ಹೊರತು ಪಕ್ಷ ಬಿಟ್ಟಿಲ್ಲ ಎಂಬುದಾಗಿ ನೂತನ ಅಧ್ಯಕ್ಷರಾದ ವಸಂತಿ ಶ್ರೀನಿವಾಸ್ ಅವರು ಈ ಸ್ಪಷ್ಟಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next