Advertisement

ಲಾಲುಗೆ ಸಿಗದ ಜಾಮೀನು

11:33 PM Apr 10, 2019 | mahesh |

ಹೊಸದಿಲ್ಲಿ: ಬಹುಕೋಟಿ ಮೇವು ಹಗರಣದ ಮೂರು ಪ್ರಕರಣಗಳಲ್ಲಿ ಜಾಮೀನು ಕೋರಿದ್ದ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಯಾದವ್‌ರ ಜಾಮೀನು ಅರ್ಜಿಯನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ನ್ಯಾಯಪೀಠ ಬುಧವಾರ ಈ ಆದೇಶ ನೀಡಿದೆ. “ನಾವು ನಿಮ್ಮನ್ನು ಬಿಡುಗಡೆ ಮಾಡುವುದಿಲ್ಲ ಎಂದು ನಿರೀಕ್ಷಿಸು ತ್ತೇವೆ’ ಎಂದು ಹೇಳಿತು. ಆರ್‌ಜೆಡಿ ಸಂಸ್ಥಾಪಕನ ಪರ ವಾದ ಮಂಡಿಸಿದ ಕೇಂದ್ರದ ಮಾಜಿ ಸಚಿವ ಕಪಿಲ್‌ ಸಿಬಲ್‌ “ನನ್ನ ಕಕ್ಷೀದಾರರು 24 ತಿಂಗಳುಗಳಿಂದ ಕಾರಾಗೃಹ ದಲ್ಲಿ ದ್ದಾರೆ’ ಎಂದು ಹೇಳಿದರು. ಅದಕ್ಕೆ ಉತ್ತರ ನೀಡಿದ ನ್ಯಾಯಪೀಠ 24 ತಿಂಗಳ ಜೈಲು ಶಿಕ್ಷೆಯನ್ನು 14 ವರ್ಷದ ಶಿಕ್ಷೆಗೆ ಹೋಲಿಕೆ ಮಾಡಬಾರದು ಎಂದು ಹೇಳಿತು.

Advertisement

ಕಪಿಲ್‌ ಸಿಬಲ್‌ ವಾದ ಮಂಡಿಸಿ, ಲಾಲು ಯಾದವ್‌ ವಿರುದ್ಧ ಸಂಚು ಹೂಡಿ ಕೇಸು ದಾಖಲಿಸಲಾಗಿದೆ. ಜತೆಗೆ ಅವರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಹಗರಣದ ಮೊತ್ತ ವಶಪಡಿಸಲಾಗಿಲ್ಲ ಎಂದರು. ಅದಕ್ಕೆ ಉತ್ತರಿಸಿದ ನ್ಯಾಯಪೀಠ “ಸದ್ಯ ಜಾಮೀನು ನೀಡಬೇಕೋ ಬೇಡವೊ ಎಂಬ ಬಗ್ಗೆ ಮಾತ್ರ ವಿಚಾರಣೆ ನಡೆಸಲಿದ್ದೇವೆ. ಪ್ರಕರಣದ ಬಗೆಗಿನ ಇತರ ಅಂಶಗಳನ್ನು ಹೈಕೋರ್ಟ್‌ ನಿರ್ಧರಿಸಲಿದೆ’ ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next