Advertisement

ಅಧಿವೇಶನಕ್ಕೆ ಬಂದಿದ್ದು ವಿಪ್‌ಗೆ ಹೆದರಿ ಅಲ್ಲ’ 

12:30 AM Feb 16, 2019 | Team Udayavani |

ಚಿಂಚೋಳಿ: ವಿಪ್‌ ಜಾರಿಗೊಳಿಸಿದ್ದರಿಂದ ಹೆದರಿ ವಿಧಾನಸಭೆಯ ಅಧಿವೇಶನದಲ್ಲಿ ನಾನು ಪಾಲ್ಗೊಂಡಿಲ್ಲ, ಬಜೆಟ್‌ ಪಾಸ್‌ ಆಗಬೇಕೆಂಬ ಏಕೈಕ ಉದ್ದೇಶದಿಂದ ಹಾಜರಾಗಿದ್ದೇನೆ ಎಂದು ಶಾಸಕ ಡಾ| ಉಮೇಶ ಜಾಧವ್‌ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಚಿಂಚೋಳಿ ಕ್ಷೇತ್ರ ದಲ್ಲಿ ಯಾವುದೇ ಅಭಿವೃದಿಟಛಿ ಕೆಲಸಗಳು ಆಗುತ್ತಿಲ್ಲ. ನನಗೆ ನೀಡಿದ ನಿಗಮ ಅಧ್ಯಕ್ಷ ಸ್ಥಾನವನ್ನು ಬೇರೆಯವರಿಗೆ ನೀಡಲಾಗಿದೆ. ಅಲ್ಲದೆ, 2018ರ ವಿಧಾನ ಸಭೆ ಚುನಾವ ಣೆಯಲ್ಲಿ ನನಗೆ ಕಾಂಗ್ರೆಸ್‌ನಿಂದ ಟಿಕೆಟ್‌ ಸಿಗದಿರುವಂತೆ ಮಾಡುವ ಹುನ್ನಾರವೂ ನಡೆಯಿತು. ಇದು ಮನಸ್ಸಿಗೆ ಬೇಸರ ತರಿಸಿದೆ.ಹೀಗಾಗಿ, ಈಗ ಸಚಿವ ಸ್ಥಾನ ನೀಡಿದರೂ ಸ್ವೀಕರಿಸುವುದಿಲ್ಲ ಎಂದರು.

ನನ್ನ ಪತ್ನಿಗೆ ಶಸ್ತ್ರಚಿಕಿತ್ಸೆಯಾಗಿ ಬೆಂಗಳೂರಿನ ಮಲ್ಲಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಸೌಜನ್ಯಕ್ಕೂ ಯಾರೊಬ್ಬರೂ ಭೇಟಿ ನೀಡಿ ಆರೋಗ್ಯ ವಿಚಾರಿಸಲಿಲ್ಲ. ನಾನು ಇನ್ನೂ ಬಿಜೆಪಿಗೆ ಸೇರ್ಪಡೆ ಆಗುವ ನಿರ್ಧಾರ ತೆಗೆದು ಕೊಂಡಿಲ್ಲ. ಮಾರ್ಚ್‌ ಮೊದಲ ವಾರದಲ್ಲಿ ನಿರ್ಧಾರ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next