Advertisement

ಬೆದರಿಕೆಗೆ ಹೆದರಲ್ಲ: ಬಬಿತಾ ಪೋಗಟ್‌

09:03 PM Apr 17, 2020 | Sriram |

ಹೊಸದಿಲ್ಲಿ: ಯಾವುದೇ ಬೆದರಿಕೆಗೆ ನಾನು ಹೆದರಲ್ಲ ದೇಶದ್ರೋಹದ ಕೆಲಸವನ್ನು ಯಾವತ್ತೂ ವಿರೋಧಿಸುತ್ತೇನೆ ಎಂದು ಭಾರತದ ಕುಸ್ತಿಪಟು ಬಬಿತಾ ಪೋಗಟ್‌ ಹೇಳಿದ್ದಾರೆ.

Advertisement

ದಿಲ್ಲಿಯಲ್ಲಿ ನಡೆದ ತಬ್ಲಿ ಜಮಾತ್‌ ಧಾರ್ಮಿಕ ಸಮಾವೇಶದಲ್ಲಿ ಭಾಗವಹಿಸಿದ ಅನೇಕ ಮಂದಿಯಲ್ಲಿ ಕೋವಿಡ್-19 ಸೋಂಕು ಕಾಣಿಸಿಕೊಂಡಿದೆ. ಇದರ ವಿರುದ್ಧ ಬಬಿತಾ ಪೋಗಟ್‌ ತಮ್ಮ ಟ್ವಿಟರ್‌ನಲ್ಲಿ “ಕೋವಿಡ್-19 ವೈರಸ್‌, ದೇಶದ ಎರಡನೇ ಅತಿ ದೊಡ್ಡ ಸವಾಲಾಗಿದೆ. ಜಲೀಲ್‌ ಜಮಾತಿ ದೇಶದ ನಂ. 1 ಪ್ರಾಬ್ಲಿಂ ಆಗಿದೆ’. ನಿಜಾಮುದ್ದೀನ್‌ ಸಮಾವೇಶದಲ್ಲಿ ಭಾಗವಹಿಸಿದ್ದವರು ಅವಿವೇಕಿಗಳು ಎಂದು ಬರೆದು ಆಕ್ರೋಶ ವ್ಯಕ್ತಪಡಿಸಿದ್ದರು.

ಇದರ ವಿರುದ್ಧ ಟ್ವಿಟರ್‌ನಲ್ಲಿ ಬಬಿತಾ ವಿರುದ್ಧ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಒಂದು ಧರ್ಮದ ವಿರುದ್ಧ ಧ್ವನಿ ಎತ್ತಿದ ಹಿನ್ನೆಲೆಯಲ್ಲಿ ವ್ಯಾಪಕ ಆರೋಪಕ್ಕೊಳಗಾಗಿದ್ದರು. ಆದರೆ ಬಬಿತಾ ಇದಕ್ಕೆ ಪ್ರತಿಕ್ರಿಯಿಸಿ ನಾನು ನೀಡಿರುವ ಹೇಳಿಕೆ ಅಚಲವಾಗಿದೆ. ಯಾವುದೇ ಬೆದರಿಕೆಗಳಿಗೆ ನಾನು ಹೆದರಲ್ಲ. ಇನ್ನೂ ಮುಂದೆಯೂ ದೇಶಕ್ಕಾಗಿ ಹೋರಾಡಲಿದ್ದೇನೆ’ ಎಂದು ವಿಡಿಯೋ ಸಂದೇಶ ಮೂಲಕ ಅವರು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next