Advertisement

ಉತ್ತರ ಕೊರಿಯಾ ಸರ್ವಾಧಿಕಾರಿ ರೀತಿ ಮಾಧುಸ್ವಾಮಿ‌: ಬಸವರಾಜು ಆರೋಪದ ವಿಡಿಯೋ ವೈರಲ್

03:33 PM Jan 06, 2022 | Team Udayavani |

ಬೆಂಗಳೂರು: ಅವನು ನಮ್ಮ‌ ಜಿಲ್ಲೆಯನ್ನೇ ಹಾಳು ಮಾಡಿಬಿಟ್ಟ. ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್ ಇದ್ದಾನಲ್ಲ, ಅವನಂತೆ ಇವನು…ಇದು
ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಬಗ್ಗೆ ಸಂಸದ ಜಿ.ಎಸ್.ಬಸವರಾಜು, ಸಚಿವ ಬೈರತಿ ಬಸವರಾಜ್ ಬಳಿ ಅಲವತ್ತುಕೊಂಡ ವಿಡಿಯೋ ಈಗ ಭಾರಿ ವೈರಲ್ ಆಗಿದೆ.

Advertisement

ಸುದ್ದಿಗೋಷ್ಠಿ ಸಂದರ್ಭದ ಈ ಪಿಸುಮಾತು ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಲು ಮಾಧುಸ್ವಾಮಿ ನಿರಾಕರಿಸಿದ್ದಾರೆ. “ಮಾತೆತ್ತಿದ್ರೆ ಹೊಡಿ ಬಡಿ ಕಡಿ ಅಂತಾನೆ. ಹಾಳು ಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ..?  ಹೀಗೆ ಸಚಿವ ಜೆಸಿ ಮಾಧುಸ್ವಾಮಿ ವಿರುದ್ಧ ಪರೋಕ್ಷವಾಗಿ ಏಕವಚನದಲ್ಲೇ ಬಸವರಾಜ್ ವಾಗ್ದಾಳಿ ನಡೆಸಿದ್ದಾರೆ.

ಉತ್ತರಕೊರಿಯಾದ ಕಿಮ್ ಜಾಂಗ್ ಉನ್ ಇವನು  . ಹಾಳುಮಾಡಿಬಿಟ್ಟ ರೀ ನಮ್ಮ ಜಿಲ್ಲೆಯನ್ನಾ..? ಮಾತೆತ್ತಿದರೇ ಹೊಡಿ ಬಡಿ ಕಡಿ  ಅಂತಾನೆ . ಮುಂದೆ ನಮ್ಮ ಜಿಲ್ಲೆಯಲ್ಲಿ ಒಂದು ಸೀಟು ಬರಲ್ಲ. ಅವನ್ ಯಾವನ್ ಒಬ್ಬ ಇಂಜಿನಿಯರ್ ಗೆ ಹೇಳ್ತಾನೆ. ಲೇ ನೀನು ಏನ್  ಹೆಂಡ್ತಿ ಸೀರೆ ಒಗಿಯೋಕೆ ಲಾಯಕ್ ನಡಿ ಆಚೆಗೆ ಅಂತಾನೆ. ಮೊನ್ನೆ ಸಾವಿರ ಕೋಟಿ ರೂ.  ಡಿಕ್ಲೇರ್ ಮಾಡಿಕೊಂಡು ಬಂದವ್ನೆ. ಸಾವಿರ ಕೋಟಿ ಅನುದಾನ ತಂದಿದ್ದಾನೆ. ಕಾರ್ಯಕ್ರಮಕ್ಕೆ  ನಮಗೆ ಯಾರಿಗೂ ಆಹ್ವಾನ ಇಲ್ಲ. ನಮ್ಮನ್ನ ಕರೆಯೋದು ಇಲ್ಲ ಎಂದು ಬೇಸರ ತೋಡಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next