Advertisement

ಉ. ಕರ್ನಾಟಕ: ಸಿಡಿಲಿಗೆ ನಾಲ್ವರ ಸಾವು

01:36 AM Oct 11, 2019 | Team Udayavani |

ಬೆಂಗಳೂರು: ಉತ್ತರ ಕರ್ನಾಟಕದ ವಿವಿಧೆಡೆ ಗುರುವಾರ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಪ್ರತ್ಯೇಕ ಘಟನೆ ಗಳಲ್ಲಿ ಸಿಡಿಲಿಗೆ ನಾಲ್ವರು ಬಲಿಯಾಗಿದ್ದು, 25 ಕುರಿಗಳು ಮೃತಪಟ್ಟಿವೆ. ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನಲ್ಲಿ ಉಮಾದೇವಿ ಬಸಪ್ಪ ಹಡಗಲ್‌ (19), ವಾಡಿ ಪಟ್ಟಣ ಸಮೀಪದ ಸಿದ್ದಪ್ಪ ನರಿಬೋಳಿ (15), ಆಳಂದ ತಾಲೂಕಿನ ಮಂಜುನಾಥ ಗುರಪ್ಪ ಮೈಂದರಗಿ (20), ರಾಯಚೂರು ತಾಲೂಕಿನ ಸುನೀತಾ (18) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದಾರೆ. ಹುಬ್ಬಳ್ಳಿ-ಧಾರವಾಡ, ಹಾವೇರಿ, ಗದಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು, ಅಪಾರ ಪ್ರಮಾಣದ ಹಾನಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next