Advertisement

ಸ್ವಾಭಿಮಾನದ ಆಟೋ ರಿಕ್ಷಾಗೆ ಜನ ಕೈಹಿಡಿಯಲಿದ್ದಾರೆ: ಮಲ್ಲಿಕಾರ್ಜುನ

12:40 PM May 09, 2023 | Team Udayavani |

ಬಾಗಲಕೋಟೆ: ಸ್ವಾಭಿಮಾನಿ ಕಾರ್ಯಕರ್ತರಿಗೆ ಕ್ಷೇತ್ರದಲ್ಲಿ ಬದಲಾವಣೆ ಬಯಸಿದ ಮತದಾರರಿಂದ ಅತ್ಯುತ್ತಮವಾದ ಬೆಂಬಲ ವ್ಯಕ್ತವಾಗುತ್ತಿದ್ದು, ಈ ಬಾರಿ ಆಟೋರಿಕ್ಷಾ ಭಾರಿ ಅಂತರದ ಮತಗಳಲ್ಲಿ ಗೆಲವು ಸಾಧಿಸಲಿದೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಚರಂತಿಮಠ ವಿಶ್ವಾಸ ವ್ಯಕ್ತಪಡಿಸಿದರು.

Advertisement

ನಗರದ ಶಕ್ತಿ ಟಾಕಿಸ್‌ನಿಂದ ಆರಂಭವಾದ ಆಟೊರಿಕ್ಷಾ ರ್ಯಾಲಿ ಬಸವೇಶ್ವರ ವೃತ್ತದ ಮೂಲಕ ಸಂಚರಿಸಿ ಸಾಸನೂರ ಪೆಟ್ರೋಲ್‌ ಬಂಕ್‌, ಕಾಲೇಜು ರಸ್ತೆ, ಪಶು ಆಸ್ಪತ್ರೆ, ಟೆಂಗಿನಮಠ ರಸ್ತೆ, ಬಸವೇಶ್ವರ ಬ್ಯಾಂಕ ರಸ್ತೆ, ಕಪಡಾ ಬಜಾರ, ವಲ್ಲಭಭಾಯಿ ಚೌಕ, ಪಂಕಾ ಮಸೀದಿ, ಎಂಜಿ ರಸ್ತೆ, ಬಸವೇಶ್ವರ ವೃತ್ತ, ಹಳೇ ಬಸ್‌ ನಿಲ್ದಾಣ ಸೇರಿದಂತೆ ನವನಗರ ಹಾಗೂ ವಿದ್ಯಾಗಿರಿಯಲ್ಲಿ ರ್ಯಾಲಿ ಮೂಲಕ ಪ್ರಚಾರ ನಡೆಸಿ ಮತಯಾಚಿಸಿ ಮಾತನಾಡಿದರು.

ಅಭಿವೃದ್ಧಿಯ ನೆಪ ಹೇಳಿ ಅಧಿಕಾರ ಗಿಟ್ಟಿಸಿಕೊಂಡವರು ಇಂದು ಜನರನ್ನು ಮರೆತಿದ್ದಾರೆ. ಅವರಿಂದ ಜನರಿಗೆ ಯಾವ ಸೇವೆಗಳು ಆಗಿಲ್ಲ. ಇಂತಹ ರಾಜಕಾರಣಿಗಳಿಂದ ಕ್ಷೇತ್ರದ ಜನ ಇಂದು ಭಯದಲ್ಲಿ ಜೀವಿಸುವಂತಾಗಿದೆ. ಕ್ಷೇತ್ರದಲ್ಲಿನ ಭಯದ ವಾತಾವರಣ ಮುಕ್ತಗೊಳಿಸುವುದಕ್ಕಾಗಿ ಪಣ ತೊಟ್ಟು ಇಂದು ನಾನು ಚುನಾವಣೆ ಸ್ಪಧಿಸುತ್ತಿದ್ದೇನೆ. ಅದಕ್ಕೆ ಕ್ಷೇತ್ರದ ಮತದಾರರೂ ಕೂಡ ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಬೆಂಬಲ ಸೂಚಿಸುತ್ತಿದ್ದಾರೆ. ಕ್ಷೇತ್ರವನ್ನು ಬದಲಾವಣೆಗೆ ಜನ ಮುಂದಾಗಿದ್ದಾರೆ ಎಂದರು.

ಕ್ಷೇತ್ರದಲ್ಲಿ ಕಾಂಗ್ರೆಸ್‌ ಸುಳ್ಳು ಭರವಸೆ ಹೇಳುತ್ತಾ ಜನರಿಗೆ ವಂಚಿಸುತ್ತಿದ್ದಾರೆ. ಇನ್ನು ಬಿಜೆಪಿಯಲ್ಲಿ ಅಹಂಕಾರಿ ನಾಯಕನಿಂದ ಒಡಕು ಉಂಟಾಗಿ ಪಕ್ಷ ಛಿದ್ರವಾಗಿದೆ. ಪಕ್ಷವನ್ನೇ ಗಟ್ಟಿಯಾಗಿ ಉಳಿಸಿಕೊಳ್ಳದ ನಾಯಕನ ಬಾಯಲ್ಲಿ ಅಭಿವೃದ್ಧಿಯ ಹಿತವಚನಗಳು ಬರುತ್ತಿವೆ, ಇಂತಹ ಮಾತಿಗೆ ಜನ ಮರಳಾಗುವುದಿಲ್ಲ. ಈ ಬಾರಿ ಸೋಲಿಸುವ ಮೂಲಕ ತಕ್ಕ ಪಾಠ ಕಲಿಸಿ ಮನೆಗೆ ಕಳುಹಿಸಲಿದ್ದಾರೆ. ನಾನು ಅಭಿವೃದ್ಧಿಯ ಚಿಂತನೆಗಳನ್ನು ಇಟ್ಟುಕೊಂಡು ಚುನಾವಣೆ ಸ್ಪರ್ಧೆ ಮಾಡುತ್ತಿದ್ದೇನೆ. ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಬೆಂಬಲ ವ್ಯಕ್ತವಗುತ್ತಿದ್ದು, ಆಟೋರಿಕ್ಷಾ ಗೆಲುವಿನ ಹಸಿರು ನಿಶಾನೆ ಹಾರಿಸಲಿದೆ ಎಂದರು.

ಸ್ವಾಭಿಮಾನಿ ಕಾರ್ಯಕರ್ತರೆಲ್ಲರೂ ಸೇವೆ ಬಾಗಲಕೋಟೆಯನ್ನು ಮಾದರಿ ಕ್ಷೇತ್ರವಾಗಿ ಪಣತೊಟ್ಟಿದ್ದು, ನೆನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಕಿಲ್ಲಾ ನಡುಗಡ್ಡೆ ಪ್ರದೇಶದ ಎಲ್ಲ ಮನೆಗಳಿಗೆ ಯೋಗ್ಯ ಪರಿಹಾರ ಹಾಗೂ ನಡುಗಡ್ಡೆ ಸ್ಥಳಾಂತರ, ರೈತರಿಗೆ 3 ಪೇಸ್‌ ಕರೆಂಡೆ ಹಾಗೂ ರೈತರ ಹೊಲಗಳಿಗೆ ನೀರಾವರಿ ಸೌಲಭ್ಯ, ಶಿರೂರ, ಅಮೀನಗಡ, ಕಮತಗಿ ಪಟ್ಟಣಗಳನ್ನು ಸ್ಮಾರ್ಟ ಸಿಯಾಗಿ ನಿರ್ಮಾಣ, ಮುಳುಗಡೆ ಸಂತ್ರಸ್ತರ ಮನೆ ಮನೆಗೆ ಹಕ್ಕುಪತ್ರ ವಿತರಣೆ ಸೇರಿದಂತೆ ಹಲವಾರು ಯೋಜನೆಗಳನ್ನು ಜಾರಿಗೆ ತರುವು ಮೂಲಕ ಕ್ಷೇತ್ರ ಅಭಿವೃದ್ಧಿ ಮಾಡಲಾಗುವುದು ಎಂದರು.

Advertisement

ಮುಖಂಡರಾದ ಬಸವರಾಜ ಕಟಗೇರಿ, ರವಿ ಕುಮಟಗಿ, ಅಶೋಕ ಮುತ್ತಿನಮಠ, ಅಶೋಕ ಮಹೇಂದ್ರಕರ, ನಾಗರಾಜ ಕೆರೂರ, ಸಚಿನ ಮರಿಶೆಟ್ಟಿ, ಸಂಜೀವ ಡಿಗ್ಗಿ, ಶ್ರೀಶೈಲ ಅಂಗಡಿ, ರಾಜು ಗೌಳಿ, ಅರುಣ ಲೋಕಾಪುರ, ಶಂಕರ ಮಗಜಿ, ವಿಶಾಲ ಮಾಂಡಗಿ, ಮುತ್ತು ಸಜ್ಜನ, ಅಶೋಕ ಸಾಳಿಂಕೆ, ವಿಜಯ ಮನಗೂಳಿ, ಶಂಕ್ರಯ್ಯಹಂಚಿನಮಠ, ವಿರೇಶ ಹಿರೇಮಠ, ಚರಣ ಜಾಧವ, ವಿಠ್ಠಲ ಕಾಳಬರ, ಈರಣ್ಣ ವಿಜಯಪುರ, ಹನಮಂತ ಕರಾಡೆ, ನಾಗರಾಜ ಕಾಂಬಳೆ, ಶಾಂತಾಬಾಯಿ ಗೋಣಿ, ವಿಜಲಕ್ಷ್ಮಿ ಅಂಗಡಿ, ಗಂಗಮ್ಮ ರಜಪೂತ, ಉಮಾ ಗವಿಮಠ, ಸುಭದ್ರಾ ದಶಮನಿ, ಸಂಗಮ್ಮ ನಾಶಿ, ರೇಖಾ ಮುರಡಿ, ಸಾಗರ ವೈದ್ಯ, ಸುರೇಶ ದೊಡಮನಿ, ವಿರೇಶ ಮುತ್ತಿನಮಠ, ಜಿ.ವಿ. ಕಂಬಳಿ, ಮುತ್ತುಮುರನಾಳ, ನರಸಿಂಹ ಉಮರ್ಜಿ, ಕರಬಸಪ್ಪ ಕತ್ತಿ, ಮುಂತಾದವರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next