Advertisement

ಚಿನ್ನಮ್ಮ ಶಶಿಕಲಾ ಮುಖ್ಯಮಂತ್ರಿ ಆಗೋದನ್ನು ಯಾರೂ ತಡೆಯಲಾರರು: AIADMK

04:52 PM Feb 07, 2017 | udayavani editorial |

ಚೆನೈ : ಚಿನ್ನಮ್ಮ ಶಶಿಕಲಾ ತಮಿಳು ನಾಡಿನ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲಾಗದು ಎಂದು ಎಐಎಡಿಎಂಕೆ ನಾಯಕ ಕೆ ಎ ಸೆಂಗೋಟಯನ್‌ ಹೇಳಿದ್ದಾರೆ. 

Advertisement

“ಕೆಲವರು ಅನಗತ್ಯ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಮಾತ್ರವಲ್ಲ ಅವರು ಪರಿಸ್ಥಿತಿಯ ದುರ್ಲಾಭವನ್ನು ಪಡೆಯಲು ಹವಣಿಸುತ್ತಿದ್ದಾರೆ’ ಎಂದು ಸೆಂಗೋಟಯನ್‌ ಟೀಕಿಸಿದರು. 

ಎಐಎಡಿಎಂಕೆ ಹಿರಿಯ ನಾಯಕ ಪಿ ಎಚ್‌ ಪಾಂಡಿಯನ್‌ ಅವರು ಜೆ ಜಯಲಲಿತಾ ಅವರ ಸಾವಿನಲ್ಲಿ  ಷಡ್ಯಂತ್ರ ನಡೆದಿದೆ ಎಂದು ಆರೋಪಿಸುವ ಮೂಲಕ ಹೊಸ ವಿವಾದ ಸೃಷ್ಟಿಸಲು ಯತ್ನಿಸಿದ ಕೆಲವೇ ತಾಸುಗಳ ಬಳಿಕ ಎಐಎಡಿಎಂ ಇದಕ್ಕೆ ಬಲವಾದ ಆಕ್ಷೇಪ ವ್ಯಕ್ತಪಡಿಸಿ “ಚಿನ್ನಮ್ಮ ಶಶಿಕಲಾ ಅವರು ತಮಿಳು ನಾಡಿನ ಮುಖ್ಯಮಂತ್ರಿ ಆಗೇ ಆಗ್ತಾರೆ; ಅದನ್ನು ಯಾರಿಂದಲೂ ತಡೆಯಲು ಆಗದು’ ಎಂದು ಸ್ಪಷ್ಟಪಡಿಸಿತು.

ಪಕ್ಷದ ನಾಯಕ ಹಾಗೂ ಶಾಸಕ ಪನ್‌ರುತಿ ರಾಮಚಂದ್ರನ್‌ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಶಶಿಕಲಾ ಅವರನ್ನು ನಾಯಕಿಯನ್ನಾಗಿ ಪಕ್ಷದ ಶಾಸಕರು ಸರ್ವಾನುಮತದಿಂದ, ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ; ನಾವು ನಮ್ಮ ನಿರ್ಧಾರವನ್ನು ರಾಜ್ಯಪಾಲರಿಗೆ ತಿಳಿಸಿದ್ದೇವೆ. ಅವರು ತಮ್ಮ ನಿರ್ಧಾರವನ್ನು ತಿಳಿಸಲು ಸಮಯ ತೆಗೆದುಕೊಂಡಿರುವುದರ ಅರ್ಥ ಅವರದನ್ನು ವಿಳಂಬಿಸಿದ್ದಾರೆ ಎಂದು ಅಲ್ಲ; ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಪ್ರಶ್ನೆಯನ್ನು ನಿಭಾಯಿಸಲಿದ್ದಾರೆ; ನಾವು ಅವರನ್ನು ಬಲವಂತಪಡಿಸುವಂತಿಲ್ಲ’ ಎಂದು ಹೇಳಿದರು. 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next