Advertisement

Shimoga; ಮೋದಿಯನ್ನು ವಿರೋಧ ಮಾಡಿ ಯಾವುದೇ ಫಲವಿಲ್ಲ: ಯಡಿಯೂರಪ್ಪ

12:37 PM Jan 28, 2024 | Team Udayavani |

ಶಿವಮೊಗ್ಗ: ಪ್ರಧಾನಿ ಮೋದಿಯವರಿಗೆ ಎಲ್ಲರೂ ಆಶೀರ್ವಾದ ಮಾಡುವಂತಹ ಸಂದರ್ಭವಿದು. ಅವರನ್ನು ವಿರೋಧ ಮಾಡುವುದರಿಂದ ಯಾವುದೇ ಫಲ ಸಿಗುವುದಿಲ್ಲ. ಯಾರೂ ವಿರೋಧ ಮಾಡದೆ, ಮೋದಿ ಮತ್ತೆ ಪ್ರಧಾನಿಯಾಗುವಂತೆ ಹಾರೈಸಿ ಪ್ರಾರ್ಥನೆ ಮಾಡಿ ಎಂದು ಯಡಿಯೂರಪ್ಪ ಹೇಳಿದರು.

Advertisement

ಶಿವಮೊಗ್ಗದ ಮತ್ತೂರಿನಲ್ಲಿ ಮಾತನಾಡಿದ ಅವರು, ಸಾಕಷ್ಟು ಜನ ಬಿಜೆಪಿ ಮತ್ತೆ ವಾಪಸ್ಸು ಬರುತ್ತಿದ್ದಾರೆ. ಈ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಬಿಟ್ಟು ಹೋದವರು ಮತ್ತೆ ಬರುತ್ತಾರೆ. ಬಿಜೆಪಿಗೆ ಹೊಸಬರು ಕೂಡ ಬರುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆ ತಯಾರಿಗೆ ಎಲ್ಲರೂ ಈಗಾಗಲೇ ಪ್ರವಾಸ ಮಾಡುತ್ತಿದ್ದಾರೆ. ನಾನು ಕೂಡ ಪ್ರವಾಸ ಮಾಡುತ್ತೇನೆ. ವಿಜಯೇಂದ್ರ ರಾಜ್ಯಾಧ್ಯಕ್ಷನಾದ ಮೇಲೆ ಪಕ್ಷದಲ್ಲಿ ಬಹಳ ಉತ್ಸಾಹದ ವಾತಾವರಣ ಬಂದಿದೆ. ಹೋದವರು ಮತ್ತೆ ಬಿಜೆಪಿಗೆ ಬರುತ್ತಿದ್ದವರು ಶಕ್ತಿ ಬಲವಾಗಿದೆ, ಅದೆಲ್ಲದರ ಬಿಜೆಪಿಗೆ ಲಾಭ ಆಗುತ್ತದೆ ಎಂದರು.

ಮೈತ್ರಿ ಸೀಟ್ ಹಂಚಿಕೆ ವಿಚಾರವಾಗಿ ಮಾತನಾಡಿ, ಅದು ಹೈಕಮಾಂಡ್ ಗೆ ಬಿಟ್ಟದ್ದು. ಅವರು ಏನು ತೀರ್ಮಾನ ತೆಗೆದುಕೊಳ್ತಾರೆ ಅದಕ್ಕೆ ನಾವು ಬದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next